ಪ್ರಜಾಸ್ತ್ರ ಸುದ್ದಿ
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಕೆರೆಮುಂದಲಹಟ್ಟಿ ಗ್ರಾಮಸ್ಥರು, ಹೋರಿ ಕದ್ದ ಆರೋಪದ ಮೇಲೆ ಈಶ್ವರ ಎಂಬಾತನನ್ನ ಬೆತ್ತಲೆ ಮಾಡಿ ಕತ್ತೆಯ ಮೇಲೆ ಕೂರಿಸಿ ಮೆರವಣಿಗೆ ಮಾಡಿದ್ರು. ಈ ಸಂಬಂಧ 9 ಮಂದಿ ವಿರುದ್ಧ ದೂರು ದಾಖಲಿಸಲಾಗಿದೆ.
ಇದೆ ತಿಂಗಳು 20 ರಂದು ಬಾಲಣ್ಣ ಎಂಬುವರಿಗೆ ಸೇರಿದ ಹೋರಿಗಳನ್ನ ಕದ್ದಿದ್ದನಂತೆ. ಮರುದಿನ ಮಾರಾಟ ಮಾಡಲು ತೆಗೆದುಕೊಂಡು ಹೋಗುವಾಗ ಸಿಕ್ಕುಬಿದ್ದಾಗ, ಬೈಕ್ ಮೇಲೆ ಅವನನ್ನ ಕರೆದುಕೊಂಡು ಬಂದು ಊರಿನಲ್ಲಿ ಥಳಿಸಿ ಕತ್ತೆ ಮೇಲೆ ಮೆರವಣಿಗೆ ಮಾಡಲಾಗಿದೆ. ಅಲ್ದೇ, ಆತನಿಗೆ ಪ್ರಾಣ ಬೆದರಿಕೆ ಹಾಕಲಾಗಿದೆಯಂತೆ. ಹೀಗಾಗಿ 9 ಮಂದಿ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.