ಕೊಡಗು: ಮೈಸೂರಿನಿಂದ ಗೋಣಿಕೊಪ್ಪಲು ಮೂಲಕ ಕೇರಳಕ್ಕೆ ಹೊರಟಿದ್ದ ಕೆಸ್ಆರ್ ಟಿಸಿ ಸಂಸ್ಥೆಗೆ ಸೇರಿದ ಐರಾವತ ಬಸ್ ವೊಂದು ಪೊನ್ನಂಪೇಟೆ ಬಳಿ ಬೆಳಗ್ಗೆ ಹಳಕ್ಕೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ.
ಮುಂಜಾನೆ ದಟ್ಟವಾದ ಮಂಜು ಕವಿದ ಪರಿಣಾಮ ರಸ್ತೆ ಸರಿಯಾಗಿ ಕಾಣಿಸಿಲ್ಲ. ಮೇಲಾಗಿ ಇಲ್ಲಿನ ರಸ್ತೆಗಳು ಚಿಕ್ಕದಾಗಿದ್ದು ನಿಯಂತ್ರಣ ತಪ್ಪಿ ಹಳಕ್ಕೆ ಉರುಳಿಬಿದ್ದಿದೆ. ಸಣ್ಣಪುಟ್ಟ ಗಾಯಗಳಾಗಿದ್ದ ಪ್ರಯಾಣಿಕರನ್ನ ಸ್ಥಳೀಯರು ಸುರಕ್ಷಿತವಾಗಿ ರಕ್ಷಿಸಿ ಮತ್ತೊಂದು ಬಸ್ ಮೂಲಕ ಕೇರಳಕ್ಕೆ ಕಳುಹಿಸಿಕೊಟ್ಟಿದ್ದಾರೆ.