ಬಿಎಸ್ವೈ ವಿರುದ್ಧ ಜಾರಕಿಜೊಳಿ ಗರಂ!

352

ಬೆಂಗಳೂರು: ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ನೂತನ ಶಾಸಕರಿಗೆ ಟೆನ್ಷನ್ ಶುರುವಾಗಿದೆ. ಸಂಕ್ರಾಂತಿ ಬಳಿ ಸಂಪುಟ ವಿಸ್ತರಣೆ ಎನ್ನಲಾಗ್ತಿದೆ. ಆದ್ರೆ, 12 ಶಾಸಕರ ಪೈಕಿ 7ರಿಂದ 8 ಮಂದಿಗೆ ಮಾತ್ರ ಮಂತ್ರಿಗಿರಿ ಎನ್ನಲಾಗ್ತಿದೆ. ಹೀಗಾಗಿ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅಸಮಾಧಾನ ಹೊರಹಾಕಿದ್ದಾರೆ.

ಜಾಹೀರಾತು

ರಾಜ್ಯದಲ್ಲಿ ದೋಸ್ತಿ ಸರ್ಕಾರ ಪತನಕ್ಕೆ 15 ಜನರು ಕಾರಣ. ಗೆದ್ದು ಬಂದ್ಮೇಲೆ ಅವರಿಗೆಲ್ಲ ಸಚಿವ ಸ್ಥಾನ ನೀಡಲಾಗುವುದು ಅಂತಾ ಹೇಳಲಾಗಿದೆ. ಈಗಾಗ್ಲೇ 12 ಮಂದಿ ಗೆಲುವು ದಾಖಲಿಸಿದ್ದಾರೆ. ಆದ್ರೆ, ಇದೀಗ 7ರಿಂದ 8 ಮಂದಿಗೆ ಸಚಿವ ಸ್ಥಾನ ಎನ್ನುತ್ತಿರುವುದು ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ. 12 ಶಾಸಕರಿಗೆ ಸಚಿವ ಸ್ಥಾನ ನೀಡುವುದಾದ್ರೆ ನೀಡಿ ಇಲ್ಲದಿದ್ರೆ ನಮ್ಮ ದಾರಿ ನಮ್ಗೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ ಅಂತಾ ಹೇಳಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!