ಸಿಂದಗಿ: ಇದು ನಿಜಕ್ಕೂ ಹೆತ್ತ ಒಡಲಿಗೆ ಬೆಂಕಿ ಹಚ್ಚಿದಷ್ಟು ನೋವಾಗುವ ವಿಷಯ. ಸುಮಾರು ಆರು ತಿಂಗಳ ಕೂಸಿನ ಕಾಲಿಗೆ ಹೆಗ್ಗಣ ಕಚ್ಚಿದ ಪರಿಣಾಮ ಮೃತಪಟ್ಟಿರುವ ಮನಕಲಕುವ ಘಟನೆ ನಡೆದಿದೆ.
ಗೋಲಗೇರಿ ಗ್ರಾಮದ ಚಂದ್ರಕಾಂತ ಹಾಗೂ ಗೀತಾ ಮಾದರ (ಕನ್ನಾಳ) ಅನ್ನೋ ದಂಪತಿಯ ಸುಮಾರು 6 ತಿಂಗಳ ಕೂಸಿಗೆ ಶನಿವಾರ ತಡರಾತ್ರಿ ಹೆಗ್ಗಣ ಕಚ್ಚಿದ ಪರಿಣಾಮ ಮಗು ಸಾವನ್ನಪ್ಪಿದೆ ಅಂತಾ ಹೇಳಲಾಗ್ತಿದೆ. ಕೆಲವರು ಇಲಿ ಕಚ್ಚಿದೆ ಅಂತಾನೂ ಹೇಳ್ತಿದ್ದಾರೆ. ಏನೇ ಆದ್ರೂ ಏನೂ ಅರಿಯದ ಕೂಸು ಸಾವನ್ನಪ್ಪಿರುವುದು ಇಡೀ ಗ್ರಾಮದಲ್ಲಿ ನೀರವಮೌನಕ್ಕೆ ಕಾರಣವಾಗಿದೆ.
ಸಿಂದಗಿ ತಾಲೂಕಿನ ಸುರಗಿಹಳ್ಳಿ ಗ್ರಾಮಕ್ಕೆ ಗೀತಾ ಎಂಬುವವರನ್ನ ಮದುವೆ ಮಾಡಿ ಕೊಡಲಾಗಿತ್ತು. ಹಬ್ಬಕ್ಕೆಂದು ಗೋಲಗೇರಿಯ ಹೊಸೂರ ಗ್ರಾಮಕ್ಕೆ ಬಂದಾಗ, ಶನಿವಾರ ತಡರಾತ್ರಿ ಈ ಅನಾಹುತ ಸಂಭವಿಸಿದೆ. ಕುಟುಂಬಸ್ಥರ ನೋವು ಮುಗಿಲು ಮುಟ್ಟಿದೆ. ಕಲಕೇರಿ ಠಾಣಾ ವ್ಶಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.