ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ: ಮಂಗಳವಾರ ಮಧ್ಯರಾತ್ರಿ ಸುಮಾರು 1 ಗಂಟೆಯ ಸಮಯದಲ್ಲಿ ಬುಲೆರೋ ಪಿಕ್ ವಾಹನ ಹಾಗೂ ಬಸ್ ನಡುವೆ ನರಗುಂದ ಹತ್ತಿರ ಅಪಘಾತ ಸಂಭವಿಸಿದೆ. ಇದರಿಂದಾಗಿ ಬುಲೆರೋ ಪಿಕ್ ವಾಹನದಲ್ಲಿದ್ದ ಇಬ್ಬರ ಕಾಲು ಮುರಿದಿದೆ. ಇನ್ನಿಬ್ಬರಿಗೆ ಗಾಯಗಳಾಗಿವೆ.
ಜೀಪ್ ನಲ್ಲಿದ್ದವರು ಲಕ್ಕುಂಡಿ ಮೂಲದವರೆಂದು ಹೇಳಲಾಗುತ್ತಿದೆ. ರೋಡ್ ಬ್ರೇಕ್ ನಲ್ಲಿ ಜೀಪ್ ನಿಧಾನ ಮಾಡಿದ್ದಾಗ ಹಿಂಬದಿಯಿಂದ ಬಸ್ ಬಂದು ಡಿಕ್ಕಿ ಹೊಡೆದ ಪರಿಣಾಮ ಈ ಅನಾಹುತ ಸಂಭವಿಸಿದೆ. ಜೀಪ್ ನಲ್ಲಿ ಅಂದಾಜು 20 ಜನರಿದ್ದರೆಂದು ತಿಳಿದು ಬಂದಿದೆ.
ಅಪಘಾತದ ವೇಳೆ ಬಸ್ ಡ್ರೈವರ್ ಓಡಿ ಹೋಗಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.