ಪ್ರಜಾಸ್ತ್ರ ಸುದ್ದಿ
ಭೋಪಾಲ: ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಪಾಟ್ನಾ ಗ್ರಾಮದ ಬಳಿ ಬಸ್ ವೊಂದು ಕಾಲುವೆಗೆ ಉರುಳಿ ಬದ್ದಿದೆ. ಇದರ ಪರಿಣಾಮ ಬರೋಬ್ಬರಿ 39 ಜನರು ಸಾವನ್ನಪ್ಪಿದ್ದಾರೆ. ಇದಕ್ಕೂ ಮೊದ್ಲು ಮೃತರ ಸಂಖ್ಯೆ 32 ಎಂದು ಹೇಳಲಾಗಿತ್ತು. ಅದು ಇದೀಗ 39ಕ್ಕೆ ಏರಿಕೆಯಾಗಿದೆ.
54 ಜನ ಪ್ರಯಾಣಿಕರನ್ನ ಹೊತ್ತುಕೊಂಡು ಸಾಗ್ತಿದ್ದ ಬಸ್ ಪಾಟ್ನಾ ಗ್ರಾಮದ ಬಳಿ ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದಿದೆ. ಇದರ ಪರಿಣಾಮ ಬರೋಬ್ಬರಿ 39 ಜನರು ಸಾವನ್ನಪ್ಪಿದ್ದಾರೆ. 7 ಜನರನ್ನ ರಕ್ಷಿಸಲಾಗಿದೆ. ಇನ್ನು 8 ಜನರ ರಕ್ಷಣಾ ಕಾರ್ಯಾ ನಡೆದಿದೆ.