ಬೆಂಗಳೂರು: ಉಪ ಚುನಾವಣೆಯ ಪ್ರಚಾರ ಜೋರಿನಿಂದ ಕೂಡಿದೆ. ಅಬ್ಬರ ಪ್ರಚಾರದ ನಡುವೆ ನಾಯಕರ ವಾಕ್ಸಮರ ಬಿರುಸಿನಿಂದ ಕೂಡಿದೆ. ಸಿಎಂ ಬಿಎಸ್ವೈ, ಮಾಜಿ ಸಿಎಂ ಸಿದ್ದರಾಮಯ್ಯ, ಹೆಚ್.ಡಿ ಕುಮಾರಸ್ವಾಮಿ, ಜಗದೀಶ ಶೆಟ್ಟರ್, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ, ಮಾಜಿ ಸಚಿವ ಡಿ.ಕೆ ಶಿವಕುಮಾರ ಸೇರಿದಂತೆ ಅನೇಕ ನಾಯಕರ ನಡುವೆ ಬಿಗ್ ಟಾಕ್ ಫೈಟ್ ನಡೆಯುತ್ತಿದೆ.
ಉಪ ಚುನಾವಣೆ ಬಳಿಕ ಸಿದ್ದರಾಮಯ್ಯ ಮೂರು ವರ್ಷ ಪ್ರತಿಪಕ್ಷ ಸ್ಥಾನ ಫಿಕ್ಸ್ ಎಂದು ಸಿಎಂ ಬಿಎಸ್ವೈ ಟಾಂಗ್ ಕೊಟ್ಟಿದ್ದಾರೆ. ರಾಜ್ಯದಲ್ಲಿ ಉಪ ಚುನಾವಣೆ ಬಳಿಕ ಯಾವುದೇ ಚುನಾವಣೆ ನಡೆಯುವುದಿಲ್ಲ. ಸಿದ್ದರಾಮಯ್ಯ ಹಾಗೆಂದುಕೊಂಡು ಭ್ರಮೆಯಲ್ಲಿದ್ದಾರೆ ಅಂತಾ ಬಿಎಸ್ವೈ ಹೇಳಿದ್ದಾರೆ.
ರಾಜ್ಯದಲ್ಲಿ ಜೆಡಿಎಸ್ ನಶಿಸುತ್ತಿದೆ. ದೇಶದಲ್ಲಿ ಕಾಂಗ್ರೆಸ್ ಅಂತ್ಯ ಶುರುವಾಗಿದೆ ಅಂತ ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ. ಮಹಾಲಕ್ಷ್ಮೀ ಲೇಔಟ್ ನಲ್ಲಿ ಅಭ್ಯರ್ಥಿ ಗೋಪಾಲಯ್ಯ ಪರ ಮತಯಾಚನೆ ವೇಳೆ ಮಾತ್ನಾಡಿದ ಅವರು, ಹೆಚ್.ಡಿ ಕುಮಾರಸ್ವಾಮಿ ಅವರು ಇವರನ್ನ ಸೋಲಿಸುತ್ತೇವೆ ಅಂತಾ ಹೇಳ್ತಾರೆ. ತಂದೆ, ಮಗನನ್ನ ಗೆಲ್ಲಿಸಿಕೊಳ್ಳಲು ಆಗ್ಲಿಲ್ಲವೆಂದು ವ್ಯಂಗ್ಯವಾಡಿದ್ರು.
ಡಿಸೆಂಬರ್ 9ರ ನಂತರ ನಾನು ನಿರ್ಗತಿಕನಾಗುತ್ತೇನೋ ಇಲ್ವೋ ಗೊತ್ತಿಲ್ಲ. ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ ನಿರ್ಗತಿಕರಾಗುತ್ತಾರೆ ಕಾದು ನೋಡಿ ಯಶವಂತ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ ಸೋಮಶೇಖರ ವಾಗ್ದಾಳಿ ನಡೆಸಿದ್ದಾರೆ. ಹೀಗೆ ಒಬ್ಬರಿಗೊಬ್ಬರು ವಾಗ್ದಾಳಿ ನಡೆಸುವ ಮೂಲಕ ಮತದಾರರ ಮೇಲೆ ಪ್ರಭಾವ ಬೀರಲು ನೋಡ್ತಿದ್ದಾರೆ.