ಬೆಂಗಳೂರು: ನಾಳೆಯಿಂದ ಸಿಎಂ ಕಚೇರಿ ಸಂಪೂರ್ಣ ಆನ್ ಲೈನ್ ಮೂಲಕ ವ್ಯವಹಾರ ನಡೆಸಲಿದೆ. ಪತ್ರ ವ್ಯವಹಾರ ಇನ್ಮುಂದೆ ಇರುವುದಿಲ್ಲ. ಪೇಪರ್ ಸಂಸ್ಕೃತಿ ಇಂದು ಅಂತ್ಯವಾಗಲಿದೆ. ನಾಳೆಯಿಂದ ಕಂಪ್ಲೀಟ್ ಡಿಜಿಟಿಲ್ ವ್ಯವಹಾರ ನಡೆಯಲಿದೆ.
ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ, ಇಲಾಖೆಗೆ ಸಂಬಂಧಿಸಿದ ಏನೇ ಮೇಲ್ ಮಾಡಿದ್ರು ಯಾರಿಗೆ, ಯಾವಾಗ ತಲುಪುತ್ತೆ ಅನ್ನೋ ಟೆನ್ಷನ್ ಬೇಡ. ಇದಕ್ಕಾಗಿ ಇ ಆಫೀಸ್ ಯಿದೆ. ಇ ಆಫೀಸ್ ಮೂಲಕ ನೇರವಾಗಿ ನೀವು ಯಾರಿಗೆ ಪತ್ರ ಬರೆದಿರುತ್ತಿರೋ ಅವರಿಗೆ ತಲುಪಲಿದೆ.
ಪತ್ರ ವ್ಯವಹಾರದಿಂದ ಸಾಕಷ್ಟು ವಿಳಂಬವಾಗ್ತಿತ್ತು. ಅಲ್ದೇ, ಸಂಬಂಧಪಟ್ಟವರಿಗೆ ತಲುಪುವಷ್ಟರಲ್ಲಿ ಸಾಕಷ್ಟು ಸಮಸ್ಯೆಗಳು ಸಹ ಆಗ್ತಿದ್ವು. ಇನ್ಮುಂದೆ ಈ ರೀತಿಯ ಯಾವ ಸಮಸ್ಯೆಯೂ ಇರುವುದಿಲ್ಲ. ನೀವು ಕಳಿಸಿರುವ ಪತ್ರಗಳು ಒಂದು ಗಂಟೆಯೊಳಗೆ ಆಯಾ ಇಲಾಖೆಯ ಮುಖ್ಯಸ್ಥರಿಗೆ ತಲುಪಲಿವೆ. ಈ ಮೂಲಕ ಸಿಎಂ ಕಚೇರಿ ಸಂಪೂರ್ಣವಾಗಿ ಇ-ಸೇವೆ ನೀಡಲಿದೆ.