ನವದೆಹಲಿ: ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನಾವೀಸ್ ಸರ್ಕಾರಕ್ಕೆ ವಿಶ್ವಾಸಮತಯಾಚನೆಗೆ ನಾಳೆ ಡೆಡ್ ಲೈನ್ ನೀಡಲಾಗಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ಪೀಠ ತೀರ್ಪು ನೀಡಿದೆ.
ಶಿವಸೇನೆ, ಎನ್ ಸಿಪಿ ಹಾಗೂ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಸಂಬಂಧಿಸಿದಂತೆ ತೀರ್ಪು ನೀಡಿದ ಸುಪ್ರೀಂ, ಹಂಗಾಮಿ ಸ್ಪೀಕರ್ ನೇಮಿಸಿ ನಾಳೆ ಸಂಜೆ 5ಗಂಟೆಯೊಳಗೆ ವಿಶ್ವಾಸಮತಯಾಚನೆ ಮಾಡಬೇಕು ಅಂತಾ ಹೇಳಿದೆ.
ಬಿಜೆಪಿ 105, ಶಿವಸೇನೆ 56, ಎನ್ ಸಿಪಿ 54 ಹಾಗೂ ಕಾಂಗ್ರೆಸ್ 44 ಸ್ಥಾನ ಹೊಂದಿದ್ದು ಪಕ್ಷೇತರರು18 ಶಾಸಕರಿದ್ದಾರೆ.