ಬಾಲಿವುಡ್ ಸ್ಟ್ರೇಟ್ ಫಾವರ್ಡ್ ನಟಿ ಅಂದ್ರೆ ಕಂಗನಾ ರಣಾವತ್. ತಮ್ಮ ಅದ್ಭುತ ನಟನೆಯ ಜೊತೆಗೆ ಮೊನಚು ಮಾತುಗಳಿಂದಲೂ ಫೇಮಸ್. ಬಿಟೌನ್ ಅಂಗಳದಲ್ಲಿ ನಾಯಕ ನಟಿಯಾಗಿ ಬೆಳೆದ ಕಂಗನಾ ಈಗ ನಿರ್ಮಾಪಕಿ ಸಹ ಆಗಿದ್ದಾರೆ.
ಮಣಿಕರ್ಣಿಕಾ ಸಿನ್ಮಾ ಮಾಡಿ ಗೆದ್ದ ನಟಿಯ ಕಣ್ಣು ಇದೀಗ ಅಯೋಧ್ಯೆಯತ್ತ ನೆಟ್ಟಿದೆ. ಹೀಗಾಗಿ ತಮ್ಮ ಮುಂದಿನ ಸಿನ್ಮಾ ‘ಅಪರಾಜಿತ ಅಯೋಧ್ಯೆ’ ಅಂತಾ ಅನೌನ್ಸ್ ಮಾಡಿದ್ದಾರೆ. ಕೆ.ವಿ ವಿಜೇಂದ್ರ ಪ್ರಸಾದ ಸ್ಕ್ರಿಪ್ಟ್ ವರ್ಕ್ ಮಾಡ್ತಿದ್ದಾರೆ.
ರಾಮ ಮಂದಿರ ವಿಚಾರ ನೂರಾರು ವರ್ಷಗಳಿಂದ ಕೇಳಿ ಬರ್ತಿದೆ. ನಾನು ಚಿಕ್ಕವಳಿರುವಾಗಿನಿಂದಲೂ ಕೇಳಿಕೊಂಡು ಬಂದಿದ್ದೇನೆ. ತುಂಬಾ ನೆಗೆಟಿವ್ ವಿಷಯಗಳನ್ನೇ ಹೇಳಿಕೊಂಡು ಬರಲಾಗ್ತಿದೆ. ಅಂತಹ ನಕಾರಾತ್ಮಕ ಅಂಶಗಳು ಚಿತ್ರದಲ್ಲಿ ಇರಲಿವೆ ಅಂತಾ ಹೇಳಿದ್ದಾರೆ.