ಇಂದಿನಿಂದ ಬೆಂಗಳೂರಲ್ಲಿ ನಿಷೇಧಾಜ್ಞೆ ಜಾರಿ

431

ಬೆಂಗಳೂರು: ನಗರ ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿರುವುದ್ರಿಂದ ಇಂದಿನಿಂದ ಒಂದು ವಾರ ನಿಷೇಧಾಜ್ಞೆ ಜಾರಿಗೆ ಬಂದಿದೆ. ಪೊಲೀಸ್ ಆಯುಕ್ತರಾದ ಭಾಸ್ಕರ ರಾವ್ ಅವರು ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ.

ಇಂದು ಬೆಳಗ್ಗೆ 10 ಗಂಟೆಯಿಂದ ನಾಮಪತ್ರಿಕೆ ಸಲ್ಲಿಕೆ ಕೆಲಸ ಆರಂಭವಾಗ್ತಿದೆ. ನವೆಂಬರ್ 18ರ ಸಂಜೆ 4 ಗಂಟೆಯ ತನಕ ನಿಷೇಧಾಜ್ಞೆ ಜಾರಿಯಲ್ಲಿರುತ್ತೆ. ನವೆಂಬರ್ 15 ಕನಕ ಜಯಂತಿ ಹಾಗೂ 17 ಭಾನುವಾರದಂದು ಒಂದಿಷ್ಟು ಸಡಿಲಿಕೆ ಇರುತ್ತೆ ಎಂದು ಆಯುಕ್ತರಾದ ಭಾಸ್ಕರ ರಾವ್ ತಿಳಿಸಿದ್ದಾರೆ.

ನಾಮಪತ್ರ ಸಲ್ಲಿಸುವ ಕಚೇರಿಗಳಾದ ಯಶವಂತಪುರ ಕ್ಷೇತ್ರದ ಕೆಂಗೇರಿ ಉಪನಗರದ ಕರ್ನಾಟಕ ಬ್ಯಾಂಕ್ ಕಟ್ಟಡ, ಶಿವಾಜಿ ನಗರದ ಕ್ವೀನ್ಸ್ ರಸ್ತೆಯ ಮತದಾರರ ನೋಂದಣಿ ಆಫೀಸ್, ಕೆ.ಆರ್ ಪುರ ಕ್ಷೇತ್ರದ ಕಂದಾಯ ಕಚೇರಿ, ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ರಾಜಾಜಿನಗರ ಆರ್.ಟಿಒ ಕಚೇರಿಯ ಸುತ್ತಮುತ್ತ 1 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತೆ. ಹೀಗಾಗಿ ಈ ವೇಳೆ ಪ್ರತಿಭಟನೆ, ಮೆರವಣಿಗೆ, ಸಭೆ ಸಮಾರಂಭ, ಐದಕ್ಕಿಂತ ಹೆಚ್ಚು ಜನ ಓಡಾಡುವುದನ್ನ ನಿರ್ಬಂಧಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!