ಉಪ ಸಮರ: ನಾಮಪತ್ರ ಸಲ್ಲಿಕೆ ಶುರು.. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಂದು ರಿಲೀಸ್!

300

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ತುಮಕೂರಿನ ಶಿರಾ ಹಾಗೂ ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿದಂತೆ ಇಂದು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಆಗುವ ಸಾಧ್ಯತೆಯಿದೆ. ಇಂದು ಸಂಜೆ ಈ ಎರಡು ಕ್ಷೇತ್ರಗಳ ಸ್ಪರ್ಧಿಗಳ ಹೆಸರು ಬಿಡುಗಡೆಯಾಗುತ್ತೆ ಎನ್ನಲಾಗ್ತಿದೆ.

ಈಗಾಗ್ಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನ ಘೋಷಿಸಿದೆ. ಶಿರಾದಲ್ಲಿ ಕಾಂಗ್ರೆಸ್ ನಿಂದ ಟಿ.ಬಿ ಜಯಚಂದ್ರ, ಜೆಡಿಎಸ್ ನಿಂದ ಅಮ್ಮಾಜಮ್ಮ ಅವರು ಸ್ಪರ್ಧಿಗಳಾಗಿದ್ದಾರೆ. ಆರ್ ಆರ್ ನಗರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕುಸುಮಾ ಸ್ಪರ್ಧೆ ಮಾಡ್ತಿದ್ದಾರೆ. ಇನ್ನು ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದೆ. ಅಕ್ಟೋಬರ್ 16 ಕೊನೆಯ ದಿನವಾಗಿದೆ.

ಅಧಿಸೂಚನೆ ಅಕ್ಟೋಬರ್ 9

ನಾಮಪತ್ರ ಸಲ್ಲಿಕೆ ಕೊನೆಯ ದಿನಾಂಕ ಅಕ್ಟೋಬರ್ 16

ನಾಮಪತ್ರ ಪರಿಶೀಲನೆ ಅಕ್ಟೋಬರ್ 17

ನಾಮಪತ್ರ ವಾಪಸ್ ಪಡೆಯುವಿಕೆ ಅಕ್ಟೋಬರ್ 19

ಮತದಾನ ನವೆಂಬರ್ 3

ಫಲಿತಾಂಶ ನವೆಂಬರ್ 10




Leave a Reply

Your email address will not be published. Required fields are marked *

error: Content is protected !!