ನಾಯಕತ್ವಕ್ಕೆ‌‌ ವಿರಾಟ್ ಗುಡ್ ಬೈ…

250

ಪ್ರಜಾಸ್ತ್ರ ಕ್ರೀಡಾ ಸುದ್ದಿ

ದುಬೈ: ಇಂಡಿಯನ್ ಕ್ರಿಕೆಟ್ ಟೀಂ ಕ್ಯಾಪ್ಟನ್ ಹಾಗೂ ಐಪಿಎಲ್ ನಲ್ಲಿ ಆರ್ ಸಿಬಿ ತಂಡದ ನಾಯಕನಾಗಿರುವ ವಿರಾಟ್ ಕೊಹ್ಲಿ‌ ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದ್ದಾರೆ. ಅದುವೇ ನಾಯಕತ್ವಕ್ಕೆ‌ ವಿದಾಯ ಹೇಳುವುದು.

ಯೆಸ್ 2021 ಐಪಿಎಲ್ 2ನೇ ಇನ್ನಿಂಗ್ಸ್ ಮುಗಿದ ನಂತರ ಆರ್ ಸಿಬಿ ತಂಡದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಾರೆ. ಈ ಮೂಲಕ 9 ವರ್ಷಗಳ ಜರ್ನಿಯಲ್ಲಿ ಬೆಂಬಲ ನೀಡಿದ ಆರ್ ಸಿಬಿ ಅಭಿಮಾನಿಗಳು ಸೇರಿದಂತೆ ಎಲ್ಲರಿಗೂ ಧನ್ಯವಾದಗಳು ಹೇಳಿದ್ದಾರೆ. ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಾರೆ. ಆದರೆ, ಅವರ ಕೊನೆಯ ಐಪಿಎಲ್ ವರೆಗೂ ಆರ್ ಸಿಬಿ ತಂಡದಲ್ಲಿ ಆಡುವುದಾಗಿ ಹೇಳಿದ್ದಾರೆ.

ಈ ಬಾರಿಯಾದರೂ ಐಪಿಎಲ್ ಟ್ರೂಫಿ ಗೆಲ್ಲುವ ಮೂಲಕ ಅಭಿಮಾನಿಗಳ ಕನಸು ನನಸು ಮಾಡಿ, ನಾಯಕ ಸ್ಥಾನಕ್ಕೆ‌ ವಿದಾಯ ಹೇಳಲಿ ಎನ್ನುತ್ತಿದ್ದಾರೆ ಫ್ಯಾನ್ಸ್.




Leave a Reply

Your email address will not be published. Required fields are marked *

error: Content is protected !!