ಆರ್ ಸಿಬಿ ಸೋಲಿನ ಕೊಂಡಿ ಕಳಿಚಿದ ಪಾಟೀದಾರ್, ಕೊಹ್ಲಿ

71

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಹೈದ್ರಾಬಾದ್: ಇಲ್ಲಿನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಗುರುವಾರ ರಾತ್ರಿ ನಡೆದ ಆರ್ ಸಿಬಿ ಹಾಗೂ ಸನ್ ರೈಸರ್ಸ್ ಹೈದ್ರಾಬಾದ್ ನಡುವಿನ ಪಂದ್ಯದಲ್ಲಿ ಬೆಂಗಳೂರು ಹುಡುಗರು ಹಿಂದಿನ ಸೇಡು ತೀರಿಸಿಕೊಂಡಿದ್ದಾರೆ. 35 ರನ್ ಗಳ ಅಂತರದಿಂದ ಆರ್ ಸಿಬಿ ಗೆಲುವು ಸಾಧಿಸಿದೆ.

ಟಾಸ್ ಗೆದ್ದು ಬ್ಯಾಟ್ ಮಾಡಿದ ಡುಪ್ಲಸಿ ಪಡೆ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿತು. ಸಬ್ ಸ್ಯೂಟ್ ಆಗಿ ಬಂದ ಯುವ ಆಟಗಾರ ರಜತ್ ಪಾಟೀದಾರ್ ಕೇವಲ 19 ಬೌಲ್ ಗಳಲ್ಲಿ ಅರ್ಧ ಶತಕ ಪೂರೈಸಿ ದಾಖಲೆ ಮಾಡಿದ. ಇದರಲ್ಲಿ 5 ಸಿಕ್ಸ್, 2 ಫೋರ್ ಇದ್ದವು.

ಕೊಹ್ಲಿ 51, ಗ್ರೀನ್ ಅಜೇಯ 37 ರನ್ ಗಳಿಂದ ಆರ್ ಸಿಬಿ 200ರ ಗಡಿ ದಾಟಿತು. ಎಸ್ ಆರ್ ಹೆಚ್ ಪರ ಜಯದೇವ್ ಉನ್ ದ್ಕತ್ 3 ವಿಕೆಟ್ ಪಡೆದು ಮಿಂಚಿದ. ನಟರಾಜನ್ 2, ಕಮಿನ್ಸ್, ಮಾರ್ಕೆಂಡ್ ತಲಾ 1 ವಿಕೆಟ್ ಪಡೆದರು.

ನಂತರ ಬ್ಯಾಟ್ ಮಾಡಿದ ಹೈದ್ರಾಬಾದ್ ತಂಡವನ್ನು 171 ರನ್ ಗಳಿಗೆ ಕಟ್ಟಿ ಹಾಕುವಲ್ಲಿ ಬೆಂಗಳೂರು ಬೌಲರ್ ಗಳು ಯಶಸ್ವಿಯಾದರು. ಅಭಿಶೇಕ್ ಶರ್ಮಾ 31, ಶಾಬಾಜ್ ಅಹ್ಮದ್ 40, ನಾಯಕ ಪಾಟ್ ಕಮಿನ್ಸ್ 31 ರನ್ ಹೊರತು ಪಡಿಸಿ ಉಳಿದವರು ಹೀಗೆ ಬಂದು ಹಾಗೇ ಹೋದರು. ಅಂತಿಮವಾಗಿ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿ ಸೋಲು ಒಪ್ಪಿಕೊಂಡಿತು.

ಸ್ವಪ್ನಿಲ್ ಸಿಂಗ್, ಕರನ್ ಶರ್ಮಾ, ಕ್ಯಾಮ್ರಿನ್ ಗ್ರೀನ್ ತಲಾ 2 ವಿಕೆಟ್ ಪಡೆದರು. ಯಶ್ ದಯಾಲ್, ಜಾಕ್ ತಲಾ 1 ವಿಕೆಟ್ ಪಡೆದರು. ಪಾಟೀದಾರ್ ಪಂದ್ಯ ಶ್ರೇಷ್ಠ ಗೌರವ ಪಡೆದರು. ಈ ಗೆಲುವಿನ ಮೂಲಕ ಬೆಂಗಳೂರು ಹುಡುಗರು ತಮ್ಮ ತವರು ನೆಲದಲ್ಲಿ ಆದ ಸೋಲಿಗೆ ಹೈದ್ರಾಬಾದ್ ಹುಡುಗರ ತವರು ನೆಲದಲ್ಲಿಯೇ ಸೋಲಿಸಿ ಸೇಡು ತೀರಿಸಿಕೊಂಡರು. ಸತತ 6 ಸೋಲಿನ ಬಳಿಕ ಗೆಲುವಿನ ನಗೆ ಬೀರಿತು. ಪ್ಲೇ ಆಫ್ ಆಸೆ ಜೀವಂತ ಉಳಿದಿದೆ.




Leave a Reply

Your email address will not be published. Required fields are marked *

error: Content is protected !!