ಅಲಯನ್ಸ್ ವಿವಿ ಕುಲಪತಿ ಕೊಲೆಗೆ 1 ಕೋಟಿ ಸುಪಾರಿ!

388

ಬೆಂಗಳೂರು: ನಗರದ ಅಲಯನ್ಸ್ ವಿಶ್ವ ವಿದ್ಯಾಲಯದ ಮಾಜಿ ಕುಲಪತಿ ಅಯ್ಯಪ್ಪ ದೊರೆ ಕೊಲೆ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅಯ್ಯೊಪ್ಪ ದೊರೆ ಹತ್ಯೆಗೆ 1 ಕೋಟಿ ರೂಪಾಯಿಗೆ ಸುಪಾರಿ ನೀಡಲಾಗಿತ್ತು ಅನ್ನೋದು ತಿಳಿದು ಬಂದಿದೆ.

2007ರಲ್ಲಿ ಅಲಯನ್ಸ್ ವಿವಿ ವಿಚಾರವಾಗಿ ಸುಧೀರ ಅಂಗೂರ ಹಾಗೂ ಮಧುಕರ ಅಂಗೂರ ನಡುವೆ ದೊಡ್ಡ ಮಟ್ಟದಲ್ಲಿ ಜಗಳ ನಡೆದಿದೆ. ಈ ವೇಳೆ ಅಯ್ಯಪ್ಪ ದೊರೆ ಮಧುಕರ ಅಂಗೂರಗೆ ಬೆಂಬಲ ನೀಡಿದ್ದಾರೆ ಅಂತಾ ಹೇಳಲಾಗ್ತಿದೆ. ಇದ್ರಿಂದ ಸಿಟ್ಟಾದ ಸುಧೀರ ಅಂಗೂರ ಕೊಲೆಗೆ ಸುಪಾರಿ ನೀಡಿದ್ದ ಅನ್ನೋದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.

ಭಾಸ್ಕರ ರಾವ್, ಪೊಲೀಸ್ ಆಯುಕ್ತ

ಸೂರಜ ಎಂಬಾತನಿಗೆ ಸುಧೀರ ಅಂಗೂರ ಸುಪಾರಿ ನೀಡಿದ್ದ. ಆತ ಒಂದು ಗ್ಯಾಂಗ್ ರೆಡಿ ಮಾಡಿ, ಅಕ್ಟೋಬರ್ 15ರಂದು ಅಯ್ಯಪ್ಪ ದೊರೆ ಮನೆ ಹತ್ತಿರವೇ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.




Leave a Reply

Your email address will not be published. Required fields are marked *

error: Content is protected !!