ಸಿಂದಗಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ, ದೇಶ ವಿರೋಧಿ ಹೇಳಿಕೆಗಳನ್ನ ನೀಡಲಾಗ್ತಿದೆ. ಹಿಂದೂಗಳ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನ ನೀಡ್ತಿರುವವರ ವಿರುದ್ಧ ಕಠಿಣ ಕ್ರಮಗಳನ್ನ ಕೈಗೊಳ್ಳಬೇಕೆಂದು ಹಿಂದೂ ಜನಜಾಗೃತಿ ಸಮಿತಿ ಒತ್ತಾಯಿಸಿದೆ.
ಪಾಕಿಸ್ತಾನ ಪರ ಜೈಕಾರ ಕೂಗುವವರ ವಿರುದ್ಧ, ಕಲಬುರಗಿಯಲ್ಲಿ ಹಿಂದೂಗಳ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದ ವಾರಿಸ್ ಪಠಾಣ್, ಜೆಎನ್ ಯು ಹಳೆ ವಿದ್ಯಾರ್ಥಿ ಶರಜೀಲ್ ಇಮಾಮ್, ಬಹಿರಂಗವಾಗಿ ಆಸ್ಸಾಂನ್ನು ಭಾರತದಿಂದ ಪ್ರತ್ಯೇಕಿಸಲು ಸಹಾಯ ಮಾಡುವುದು ಮತ್ತು ಮಾಡುವಂತೆ ಇತರರಿಗೆ ಪ್ರಚೋದನೆ ನೀಡುವ ಕೆಲಸ ಮಾಡ್ತಿದ್ದಾನೆ. ಅಲ್ದೇ ದೇಶವಿರೋಧಿ ಚಟುವಟಿಕೆ ಮಾಡುವವರಿಗೆ ಬೆಂಬಲ ನೀಡ್ತಿರುವ ಪಿಎಫ್ಐ ಸಂಘಟನೆ ನಿಷೇಧ ಮಾಡುವಂತೆ ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ತಹಶೀಲ್ದಾರ್ ಸಂಜೀವ ದಾಸರ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ.
ಈ ವೇಳೆ ಮಲ್ಲನಗೌಡ ಪಾಟೀಲ, ಲಿಂಗರಾಜ ಪಾಟೀಲ, ಗುರುರಾಜ ಮೌಳಿ, ಶರತ ಕುಲ್ಕರ್ಣಿ, ರಾಕೇಶ ಶಂಬೇವಾಡ, ಪರಶುರಾಮ ಲಿಂಗಸೂರ, ಅಶೋಕ ಬಡಿಗೇರ, ಆನಂದ ನಾಯ್ಕ, ಸತೀಶ ಜೋಶಿ, ಪ್ರವೀಣ ತೊನಸೆ, ಅರುಣ ಶಿಂಧೆ, ರಾಜು ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ರು.