ವಾಕ್ ಸಿದ್ಧಿ ಕನ್ನೊಳ್ಳಿ ಶ್ರೀಗಳ ಪುಣ್ಯಸ್ಮರಣೆ: ಅನ್ನಪ್ರಸಾದ ಸೇವೆ

276

ಸಿಂದಗಿ: ತಾಲೂಕಿನ ಕನ್ನೊಳ್ಳಿಯ ಶತಾಯುಷಿ ಲಿಂಗೈಕ್ಯ ಶ್ರೀ ಷ.ಬ್ರ ಮರುಳರಾದ್ಯ ಶಿವಾಚಾರ್ಯರವರ ಪುಣ್ಯಸ್ಮರಣೆ ನಿಮಿತ್ಯ ಫೆಬ್ರವರಿ 28 ಶುಕ್ರವಾರದಂದು ಅನ್ನ ಸಂತರ್ಪಣೆ ಸೇವೆ ಸಲ್ಲಿಸಲಾಗ್ತಿದೆ. ಉಜ್ಜಯಿನಿ ಪೀಠದ ಶ್ರೀ 1008 ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ಶಿವಾಚಾರ್ಯ ಭಗವತ್ಪಾದಂಗಳವರ ದಿವ್ಯ ಸಾನಿಧ್ಯದಲ್ಲಿ ಅನ್ನ ಪ್ರಸಾದ ಸೇವೆ ಹಮ್ಮಿಕೊಳ್ಳಲಾಗಿದೆ.

ಶಾಂತಮ್ಮಗೌಡ್ತಿ ಮಡಿವಾಳಪ್ಪಗೌಡ ಪಾಟೀಲ(ಮಾಗಣಗೇರಾ) ಇವರ ಕುಟುಂಬಸ್ಥರಿಂದ ಫೆಬ್ರವರಿ 28ರ ಬೆಳಗ್ಗೆ 10 ಗಂಟೆಗೆ ಕನ್ನೊಳ್ಳಿ ಹಿರೇಮಠದ ಆವರಣದಲ್ಲಿ ಆಯೋಜನೆ ಮಾಡಲಾಗಿದೆ. ಕನ್ನೊಳ್ಳಿ, ಬಮ್ಮನಜೋಗಿ ಹಾಗೂ ಸುತ್ತಲಿನ ಗ್ರಾಮಸ್ಥರು ಮತ್ತು ಶ್ರೀಗಳ ಶಿಷ್ಯ ಬಳಗದ ಸಮ್ಮುಖದಲ್ಲಿ ಈ ಒಂದು ಕಾರ್ಯಕ್ರಮ ನಡೆಯಲಿದೆ ಮಾಗಣಗೇರಾ ಕುಟುಂಬಸ್ಥರು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!