ಕಾರ್ ಅಪಘಾತ: ಶಾಸಕರ ಪುತ್ರ ಸೇರಿ 7 ವಿದ್ಯಾರ್ಥಿಗಳ ದುರ್ಮರಣ

551

ಪ್ರಜಾಸ್ತ್ರ ಸುದ್ದಿ

ಮುಂಬೈ: ಕಾರೊಂದು ಸೇತುವೆಯ ಮೇಲಿಂದ ಸುಮಾರು 50 ಅಡಿ ಆಳಕ್ಕೆ ಬಿದ್ದು ಬಿಜೆಪಿ ಶಾಸಕರ ಪುತ್ರ ಸೇರಿ 7 ಮೆಡಿಕಲ್ ವಿದ್ಯಾರ್ಥಿಗಳು ಮೃತಪಟ್ಟ ಘಟನೆ ವಾರ್ಧಾ-ಯವತ್ಮಾಲ್ ಹೆದ್ದಾರಿ ಬಳಿ ಸೋಮವಾರ ತಡರಾತ್ರಿ ನಡೆದಿದೆ.

ಮೃತ 7 ವಿದ್ಯಾರ್ಥಿಗಳು ಸಾವಂಗಿಯ ಮೆಡಿಕಲ್ ಕಾಲೇಜಿನವರು ಎಂದು ತಿಳಿದು ಬಂದಿದೆ. ಇದರಲ್ಲಿ ತಿರೋಡಾ ಶಾಸಕ ವಿಜಯ್ ರಹಂಗ್ ಡೇಲ್ ಪುತ್ರ ಆವಿಷ್ಕರ್ ಕೂಡಾ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ. ದಿಯೋಲಿಯಿಂದ ವಾರ್ಧಾ ಕಡೆಗೆ ಬರುತ್ತಿರುವಾಗ ಝೈಲೊ ಕಾರು ಅಪಘಾತಗೊಂಡಿದೆ.

ನೀರಜ್ ಚೌಹಾಣ್, ನಿತೇಶ್ ಸಿಂಗ್, ವಿವೇಕ್ ನಂದನ್, ಪ್ರತ್ಯೂಷ್ ಸಿಂಗ್, ಶುಭ ಜೈಸ್ವಾಲ್, ಪವನ್ ಶಕ್ತಿ ಇತರೆ ಮೃತ 6 ವಿದ್ಯಾರ್ಥಿಗಳಾಗಿದ್ದಾರೆ. ಬೇರೆ ರಾಜ್ಯಗಳಿಂದ ಬಂದ ವಿದ್ಯಾರ್ಥಿಗಳು ಮೆಡಿಕಲ್ ಅಧ್ಯಯನ ಮಾಡುತ್ತಿದ್ದರು. ಘಟನೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದು ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಘೋಷಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!