11 ಜನರ ಬಲಿ ಪಡೆದ ಅಪಘಾತದ ನಡುವೆ ಕಾರು ಪಲ್ಟಿ

314

ಪ್ರಜಾಸ್ತ್ರ ಸುದ್ದಿ

ಧಾರವಾಡ: ತಾಲೂಕಿನ ಬಾಡ ಬಳಿ ಬರೋಬ್ಬರಿ 11 ಜನರ ಪ್ರಾಣವನ್ನು ಬಲಿ ಪಡೆದ ಕ್ರೂಸರ್ ಅಪಘಾತ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅಪಘಾತ ಸಂಭವಿಸಿದೆ. ಸೇತುವೆ ಮೇಲಿಂದ ಕಾರು ಬಿದ್ದ ಘಟನೆ ತಾಲೂಕಿನ ಅಣ್ಣಿಗೇರಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ.

ಹುಬ್ಬಳ್ಳಿಯಿಂದ ಗದಗ ಕಡೆ ಹೊರಟಿದ್ದ ಕಾರು ಸೇತುವೆಯಿಂದ ಕೆಳಗೆ ಬಿದ್ದು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!