ಪಿಯು ಪರೀಕ್ಷೆ ಮುಗಿಸಿ ಬರ್ತಿದ್ದ ವಿದ್ಯಾರ್ಥಿಗೆ ಯಮನಾದ ಕಾರು

395

ಪ್ರಜಾಸ್ತ್ರ ಸುದ್ದಿ

ಕೋಲ್ಹಾರ: ದ್ವಿತೀಯ ಪಿಯುಸಿ ಕೊನೆಯ ಪರೀಕ್ಷೆ ಇಂದು ನಡೆದಿದೆ. ಇದನ್ನ ಮುಗಿಸಿಕೊಂಡು ಬೈಕ್ ಮೇಲೆ ಹೊರಟಿದ್ದ ವಿದ್ಯಾರ್ಥಿಗಳ ಬೈಕ್ ಕಾರಿಗೆ ಡಿಕ್ಕಿಯಾಗಿದೆ. ಇದ್ರಿಂದಾಗಿ ಓರ್ವ ವಿದ್ಯಾರ್ಥಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

18 ವರ್ಷದ ಮಂಜುನಾಥ ರೂಡಗಿ ಸಾವನ್ನಪ್ಪಿದ್ದ ದುರ್ದೈವಿ ವಿದ್ಯಾರ್ಥಿ. ಕೋಲ್ಹಾರ ತಾಲೂಕಿನ ಮಲಘಾನ ಕ್ರಾಸ್ ಬಳಿಯ ಎನ್ಎಚ್ 218 ಈ ಘಟನೆ ನಡೆದಿದೆ. ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ರೆ ಮೂವರು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಸಂಗು ಜಮಖಂಡಿ, ನೀಲಪ್ಪ ಜಮಖಂಡಿ, ರಮೇಶ ಮೋಹಿತೆ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಗೊಂಡ ವಿದ್ಯಾರ್ಥಿಗಳನ್ನ ವಿಜಯಪುರದ‌ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಘಟ‌ನೆ ಬಳಿಕ ಕಾರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಕುರಿತು ಕೋಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!