ಅಂತ್ಯಸಂಸ್ಕಾರಕ್ಕೆ ಹೊರಟವರು ಮಸಣ ಸೇರಿದರು

500

ಪ್ರಜಾಸ್ತ್ರ ಸುದ್ದಿ

ನೆಲಮಂಗಲ: ಕಾರ್ ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ನೆಲಮಂಗಲ-ಕುಣಿಗಲ್ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದೆ. ಮೃತರನ್ನ ಬೆಂಗಳೂರಿನ ಪುರುಷೋತ್ತಮ, ಚಂದು ಹಾಗೂ ನವೀನ ಎಂದು ಗುರುತಿಸಲಾಗಿದೆ. ಇನ್ನೋರ್ವ ತಿಪಟೂರು ನಿವಾಸಿ ಆದಿತ್ಯನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಟಿಯೋಸ್ ಕಾರಿನಲ್ಲಿ ಈ ನಾಲ್ವರು ಕುಣಿಗಲ್ ಕಡೆ ಹೊರಟ್ಟಿದ್ರು. ಆದ್ರೆ, ಬೆಂಗಳೂರು-ಕುಣಿಗಲ್ ಬೈಪಾಸ್ ಬಳಿ ಇವರ ಕಾರ್ ನಿಯಂತ್ರಣ ಕಳೆದುಕೊಂಡು ಡಿವೈಡರ್ ಗೆ ಡಿಕ್ಕಿಯಾಗಿ ಪಕ್ಕದ ರಸ್ತೆಗೆ ನುಗ್ಗಿ ಆ ಕಡೆಯಿಂದ ಬರ್ತಿದ್ದ ಲಾರಿಗೆ ಡಿಕ್ಕಿಯಾಗಿದೆ. ಇದ್ರಿಂದಾಗಿ ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿದ್ದಾರೆ.

ಹೆದ್ದಾರಿಯಲ್ಲಿ ಈ ಘಟನೆ ನಡೆದಿರುವುದ್ರಿಂದ ರಸ್ತೆ ಸಂಚಾರ ಅಸ್ತವ್ಯಸ್ಥವಾಗಿತ್ತು. ನೆಲಮಂಗಲ ಠಾಣೆ ಪೊಲೀಸ್ರು ಬಂದು ಗಾಯಾಳು ಆದಿತ್ಯನನ್ನ ಆಸ್ಪತ್ರೆಗೆ ಸಾಗಿಸಿದ್ರು. ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಹೊರಟವರು ಮಸಣ ಸೇರಿರುವುದು ನಿಜಕ್ಕೂ ದುರಂತ.




Leave a Reply

Your email address will not be published. Required fields are marked *

error: Content is protected !!