ತಿರಂಗಯಾತ್ರೆಯೊಂದಿಗೆ ಸಿಂದಗಿಯಲ್ಲಿ ಕಾರ್ಗಿಲ್ ವಿಜಯೋತ್ಸವ

421

ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದಲ್ಲಿಂದು ಕಾರ್ಗಿಲ್ ವಿಜಯೋತ್ಸವ ಆಚರಣೆ ಮಾಡಲಾಯ್ತು. ಎಬಿವಿಪಿ ವತಿಯಿಂದ ಬೃಹತ್ ತಿರಂಗಯಾತ್ರಾ ಮೆರವಣಿಗೆ ನಡೆಸುವ ಮೂಲಕ ವೀರ ಯೋಧರಿಗೆ ಗೌರವ ಮತ್ತು ಹುತಾತ್ಮ ಯೋಧರನ್ನ ಸ್ಮರಿಸಲಾಯ್ತು.

ಪಟ್ಟಣದ ಬಸವೇಶ್ವರ ಸರ್ಕಲ್ ನಿಂದ ಶುರುವಾದ ಮೆರವಣಿಗೆ, ವಿಜಯಪುರ ರೋಡ್ ಮಾರ್ಗವಾಗಿ ಸಂಗೊಳ್ಳಿ ರಾಯಣ್ಣ ವೃತ, ಅಂಬಿಗೇರ ಚೌಡಯ್ಯ ಸರ್ಕಲ್, ಅಂಬೇಡ್ಕರ್ ಸರ್ಕಲ್, ಟಿಪ್ಪು ಸುಲ್ತಾನ್ ಸರ್ಕಲ್, ವಿವೇಕಾನಂದ ವೃತ್ತದ ಮೂಲಕ ಹಾದು ಮರಳಿ ಬಸವೇಶ್ವರ ಸರ್ಕಲ್ ನಲ್ಲಿ ಸೇರಲಾಯ್ತು.

ವಿವಿಧ ಕಾಲೇಜುಗಳ ಸುಮಾರ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಒಂದು ಮೆರವಣಿಗೆಯಲ್ಲಿ ಭಾಗವಹಿಸಿದ್ರು. ಈ ವೇಳೆ 100 ಮೀಟರ್ ಉದ್ದದ ತಿರಂಗಯಾತ್ರೆ ನಡೆಸಲಾಯ್ತು. ನೂರಾರು ವಿದ್ಯಾರ್ಥಿಗಳು ತ್ರಿವರ್ಣಧ್ವಜವನ್ನ ಹಿಡಿದುಕೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಯೋಧರಿಗೆ ಜೈಕಾರ ಕೂಗಿದ್ರು. ಈ ವೇಳೆ ಮಾಜಿ ಸೈನಿಕರು ಸಹ ಹೆಜ್ಜೆ ಹಾಕಿದ್ರು. ಇನ್ನು ಸಂಜೆ 6 ಗಂಟೆಗೆ ಬಸವೇಶ್ವರ ಸರ್ಕಲ್ ಹತ್ತಿರ ಕಾರ್ಯಕ್ರಮ ಆಯೋಜಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!