ಕೇಂದ್ರ ಬಜೆಟ್ ಪ್ರಮುಖ ಅಂಶಗಳು

281

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮಾನ್ 3ನೇ ಬಾರಿಗೆ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಪೇಪರ್ ಲೆಸ್ ಬಜೆಟ್ ಮಂಡನೆಯಾಗಿದೆ. ಬಜೆಟ್ ನ ಕೆಲ ಪ್ರಮುಖ ಅಂಶಗಳು ಇಲ್ಲಿವೆ.

ಕೋವಿಡ್ 19 ಸಂಕಷ್ಟದಲ್ಲಿಯೂ ಜನರ ಜೊತೆಗೆ ಸರ್ಕಾರ ನಿಂತಿದೆ ಎಂದು ಹೇಳಿರುವ ಸಚಿವರು, 40 ಕೋಟಿ ಜನರಿಗೆ ನೇರ ಹಣ ನೀಡಲಾಗಿದೆ ಎಂದಿದ್ದಾರೆ. ಮೇ 20ರದು ಆತ್ಮ ನಿರ್ಭಾರ್ ಭಾರತ್ ಯೋಜನೆ ಮೂಲಕ 27.1 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್, ಪಿಎಂ ಗರೀಬ್ ಕಲ್ಯಾಣ್ ಯೋಜನೆ ಘೋಷಿಸಲಾಗಿದೆ ಎಂದರು.

ಇನ್ನು ಕರೋನಾ ಲಸಿಕೆ ನೀಡುವಲ್ಲಿ ಭಾರತ ಯಶಸ್ವಿಯಾಗಿದೆ. ರಾಷ್ಟ್ರೀಯ ಆರೋಗ್ಯ ಶಿಕ್ಷಣ ಸಂಸ್ಥೆಗಳನ್ನ ಹಾಗೂ ಆರೋಗ್ಯ ಕ್ಷೇತ್ರದ ಮೂರು ವಲಯಗಳನ್ನ ಬಲಗೊಳಿಸುವುದು. ಶುದ್ಧ ಕುಡಿಯುವ ನೀರು ಒದಗಿಸಲು ಪ್ರಾಮುಖ್ಯತೆ. 17 ಸಾವಿರ ಗ್ರಾಮೀಣ ವೆಲ್ನಸ್ ಸೆಂಟರ್ ಗಳಿಗೆ ಬೆಂಬಲ ನೀಡಲಾಗುವುದು. 20 ವರ್ಷಗಳ ವಾಹನಗಳ ಸ್ಕ್ರ್ಯಾಪ್ ಮಾಡಲಾಗುವುದು ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!