ತಂದೆಯ ನಿರ್ಲಕ್ಷ್ಯಕ್ಕೆ 1 ವರ್ಷದ ಮಗು ಸಾವು

375

ಚಾಮರಾಜನಗರ: ತಂದೆಯ ನಿರ್ಲಕ್ಷ್ಯದಿಂದ ಮಗುವೊಂದು ಸಾವನ್ನಪ್ಪಿದ ಘಟನೆ, ಚಿಕ್ಕಹೊಳೆ ಹತ್ತಿರದ ಬೊಮ್ಮನಹಳ್ಳಿಯಲ್ಲಿ ನಡೆದಿದೆ. 1 ವರ್ಷದ ರೋಹಿತ ಮೃತಪಟ್ಟ ಕೂಸು.

ಶಕ್ತಿವೇಲು ಎಂಬಾತ ಶೆಡ್ ನಿಂದ ಕಾರನ್ನ ರಿವರ್ಸ್ ಮಾಡಲು ಹೋಗಿದ್ದಾರೆ. ಅವರನ್ನ ಹಿಂಬಾಲಿಸಿಕೊಂಡು ಬಂದ ಮಗುವನ್ನ ಗಮನಿಸಿಲ್ಲ. ಹೀಗಾಗಿ ಕಾರು ರಿವರ್ಸ್ ತೆಗೆದುಕೊಳ್ಳುವಾಗ ಮಗುವಿಗೆ ರಭಸವಾಗಿ ಗುದ್ದಿದೆ. ಇದ್ರಿಂದಾಗಿ ಮಗು ತೀವ್ರವಾಗಿ ಗಾಯಗೊಂಡಿದೆ.

ತಕ್ಷಣ ಮಗುವನ್ನ ತಾಳವಾಡಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ. ಆದ್ರೆ, ಚಿಕಿತ್ಸೆ ಫಲಿಸದೆ ಮಗು ಸಾವನ್ನಪ್ಪಿದೆ. ಈ ಸಂಬಂಧ ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!