ಪ್ರಜಾಸ್ತ್ರ ಸುದ್ದಿ
ಮೈಸೂರು: ನೀರು ತುಂಬಿದ ಬಕೆಟ್ ವೊಳಗೆ ಎರಡು ವರ್ಷದ ಮಗು ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಹುಣಸೂರು ತಾಲೂಕಿನ ತರಿಕಲ್ಲು ಗ್ರಾಮದಲ್ಲಿ ನಡೆದಿದೆ. ಸುಂದರರಾಜ ಅನ್ನೋ ಎರಡು ವರ್ಷದ ಮಗು ಮೃತಪಟ್ಟಿದೆ.
ಮನೆಯೊಳಗೆ ಆಟವಾಡ್ತಿದ್ದು ಮಗು ಬಚ್ಚಲು ಮನೆ ಕಡೆ ಹೋಗಿದೆ. ಅಲ್ಲಿ ನೀರು ತುಂಬಿಟ್ಟಿದ್ದ ಬಕೆಟ್ ನಲ್ಲಿ ಬಿದ್ದಿದೆ. ಇದನ್ನ ಮನೆಯವರು ಗಮನಿಸದೆ ಹೋಗಿದ್ರಿಂದ ಅನಾಹುತವೊಂದು ನಡೆದಿದೆ. ಬಳಿಕ ಮಗುವಿನ ಹುಡುಕಾಟ ನಡೆಸಿದಾಗ ಮಗು ಬಕೆಟ್ ವೊಳಗೆ ಬಿದ್ದಿರುವುದು ಗೊತ್ತಾಗಿದೆ. ಆದ್ರೆ, ಅಷ್ಟರೊಳಗೆ ಕಾಲ ಮಿಂಚಿ ಹೋಗಿದೆ.