ಪ್ರಜಾಸ್ತ್ರ ಸುದ್ದಿ
ವಿಜಯಪುರ: ಕಾಲುವೆಯಲ್ಲಿ ಬಿದ್ದ ಮಗುವನ್ನ ಉಳಿಸಲು ಮಹಿಳೆಯೊಬ್ಬರು ತನ್ನ ಮಾನವನ್ನ ಲೆಕ್ಕಿಸದೆ ಜೀವ ಉಳಿಸಿದ್ದಾರೆ. ಇದ್ರಿಂದಾಗಿ ಒಂದು ಮಗುವಿನ ಜೀವ ಉಳಿದಿದೆ. ಅಂದ್ಹಾಗೆ ಈ ಘಟನೆ ನಡೆದಿದ್ದು, ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿ.
ಅರುಣ ದೊಡಮನಿ ಅನ್ನೋ ಬಾಲಕ ಶೌಚಕ್ಕೆಂದು ಹೊರಗೆ ಬಂದು ಕಾಲುವೆ ಕಡೆ ಬಂದಿದ್ದಾನೆ. ಬಳಿಕ ಕಾಲುವೆ ನೀರಿಗೆ ಇಳಿದಿದ್ದಾನೆ. ನೀರಿನ ಸೆಳೆತ ಬಾಲಕನನ್ನ ಎಳೆದುಕೊಂಡಿದೆ. ಇದನ್ನ ನೋಡಿದ ಸಕೀನಾ ಬೇಗಂ ಅನ್ನೋ ಮಹಿಳೆ ಕಿರುಚಾಡಲು ಶುರು ಮಾಡಿದ್ದಾರೆ.
ಕಾಲುವೆ ಹಾದಿಯಲ್ಲಿ ಹೊರಟ್ಟಿದ್ದ ಶಿಕ್ಷಕ ಮಹೇಶ ಗಾಳಪ್ಪಗೋಳ ಎಂಬುವರಿಗೆ ವಿಷಯ ತಿಳಿಸಿದಾಗ, ನನ್ಗೆ ಅರ್ಧಂಬರ್ಧ ಈಜು ಬರುತ್ತೆ. ನೀವು ಸೀರೆ ಕೊಟ್ಟರೆ ಪ್ರಯತ್ನ ಮಾಡ್ತೀನಿ ಎಂದಿದ್ದಾರೆ. ಆ ಮಹಿಳೆ ತನ್ನ ಮಾನಕ್ಕಿಂತ ಮಗುವಿನ ಪ್ರಾಣ ಮುಖ್ಯವೆಂದು ಹೇಳಿ, ಸೀರೆ ಕಳೆದು, ಒಂದು ತುದಿ ಅವರು ಹಿಡಿದಿದ್ದಾರೆ. ಮತ್ತೊಂದು ತುದಿ ಶಿಕ್ಷಕ ಹಿಡಿದು ಕಾಲುವೆಗೆ ಇಳಿದು ಮಗುವನ್ನ ರಕ್ಷಣೆ ಮಾಡಿದ್ದಾರೆ.
ಇವರ ಈ ಕಾರ್ಯದಿಂದ ಮಗುವಿನ ಜೀವ ಉಳಿದಿದೆ. ಸಕೀನಾ ಬೇಗಂ ಅವರಿಗೆ ಮಗುವಿನ ಕುಟುಂಬಸ್ಥರು ಸೇರಿದಂತೆ ಊರಿನ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.