ವಿಜಯಪುರದಲ್ಲಿ ಬಾಣಂತಿ ಸಾವು

376

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಹೆರಿಗೆ ಸಮಯದಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ ಮತ್ತು ಮಗು ಸಾವನ್ನಪ್ಪಿರುವ ಘಟನೆ ನಗರದ ಜಿಲ್ಲಾ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿದೆ. ಕವಿತಾ ಅಂಜುಟಗಿ ಸಾವನ್ನಪ್ಪಿದ ತಾಯಿ ಎಂದು ತಿಳಿದು ಬಂದಿದೆ.

ಬಾಣಂತಿ ಕವಿತಾ ಹಾಗೂ ಮಗು ಸಾವಿಗೆ ವೈದ್ಯರು ನಿರ್ಲಕ್ಷ್ಯವೇ ಕಾರಣ ಎಂದು ಕವಿತಾ ಪೋಷಕರು ಹಾಗೂ ಸಂಬಂಧಿಕರು ಆರೋಪಿಸಿದ್ದಾರೆ.

ನಿನ್ನೆ ರಾತ್ರಿ ಮೃತ ಕವಿತಾಳ ನಾರ್ಮಲ್ ಡೆಲಿವರಿಯಾಗುತ್ತೆ ಎಂದಿದ್ದ ವೈದ್ಯರು, ತಡರಾತ್ರಿ ರಕ್ತ ತೆಗೆದುಕೊಂಡು ಬರಲು ಕವಿತಾ ಕುಟುಂಬಕ್ಕೆ ವೈದ್ಯರು ಸೂಚಿಸಿದರು. ಆದ್ರೇ, ಏಕಾಏಕಿ ಬೆಳಿಗ್ಗೆ ತಾಯಿ ಮತ್ತು ಮಗು ಸಾವಿನ ವಿಚಾರವನ್ನು ಪೋಷಕರಿಗೆ ವೈದ್ಯರು ತಿಳಿಸಿದ್ದಾರೆ ಎಂದು ಹೇಳಲಾಗ್ತಿದೆ.

ಈ ಘಟನೆಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ಆರೋಪಿಸಿ ಆಸ್ಪತ್ರೆ ಎದುರು ಮೃತ ಮಹಿಳೆ ತಾಯಿ ಕಮಲಾಬಾಯಿ, ಪತಿ ಆನಂದ ಅಂಜುಟಗಿ ಕಣ್ಣೀರು ಹಾಕುತ್ತಾ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ರು.




Leave a Reply

Your email address will not be published. Required fields are marked *

error: Content is protected !!