60 ಸಾವಿರದತ್ತ ಸೋಂಕು.. ಇಂದು 93 ಸಾವು..

338

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಕರೋನಾ ಆರ್ಭಟ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 4,537 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ 59,652ಕ್ಕೆ ಏರಿಕೆಯಾಗಿದೆ. ಇನ್ನು 93 ಜನ ಸಾವನ್ನಪ್ಪಿದ್ದು, 1,240ಕ್ಕೆ ಏರಿಕೆ ಕಂಡಿದೆ.

1018 ಜನ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೂ 21,775 ಜನ ಗುಣಮುಖರಾಗಿದ್ದಾರೆ. 36,631 ಪ್ರಕರಣಗಳು ಸಕ್ರಿಯವಾಗಿವೆ. ಜಿಲ್ಲಾವಾರು ಸೋಂಕಿತ ಅಂಕಿಸಂಖ್ಯೆ ಹೀಗಿದೆ..

ಬೆಂಗಳೂರು ನಗರ 2,125, ದಕ್ಷಿಣ ಕನ್ನಡ 509, ಧಾರವಾಡ 186, ವಿಜಯಪುರ 176, ಬಳ್ಳಾರಿ 155, ಬೆಳಗಾವಿ 137, ಉತ್ತರ ಕನ್ನಡ 116, ಶಿವಮೊಗ್ಗ 114, ಉಡುಪಿ 109, ಚಿಕ್ಕಬಳ್ಳಾಪುರ 107, ಮೈಸೂರು 101, ಬೆಂ.ಗ್ರಾ 94, ಕಲಬುರಗಿ 82, ಗದಗ 82, ಬೀದರ 72, ದಾವಣಗೆರೆ 56, ಹಾಸನ 51, ಮಂಡ್ಯ 42, ಕೋಲಾರ 35, ಚಾಮರಾಜನಗರ 34, ತುಮಕೂರು 24, ಚಿಕ್ಕಮಗಳೂರು 24, ಚಿತ್ರದುರ್ಗ 22, ರಾಯಚೂರು 16, ಹಾವೇರಿ 15, ಬಾಗಲಕೋಟೆ 13, ಕೊಪ್ಪಳ 13, ರಾಮನಗರ 13, ಕೊಡಗು 10, ಯಾದಗರಿ 4 ಪ್ರಕರಣಗಳು ದಾಖಲಾಗಿವೆ.

ಇನ್ನು ಬೆಂ.ನ 49, ದಕ್ಷಿಣ ಕನ್ನಡ 7, ಧಾರವಾಡ 6, ಕಲಬುರಗಿ 5, ಬಳ್ಳಾರಿ 3, ಬೆಳಗಾವಿ 3, ದಾವಣಗೆರೆ 3, ಬಾಗಲಕೋಟೆ 3, ತುಮಕೂರು 3, ಹಾವೇರಿ 2, ಮೈಸೂರು 2, ಉಡುಪಿ 2, ಬೀದರ 1, ಮಂಡ್ಯ 1 ಹಾಗೂ ಕೊಡಗಿನಲ್ಲಿ 1 ಸಾವು ಸೇರಿದಂತೆ 93 ಜನ ಸಾವನ್ನಪ್ಪಿದ್ದಾರೆ.




Leave a Reply

Your email address will not be published. Required fields are marked *

error: Content is protected !!