‘ಸೋಂಕಿತರ ಮನೆ ಮುಂದೆ ಬೋರ್ಡ್ ಹಾಕಬೇಡಿ’

356

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕೋವಿಡ್ 19 ಸೋಂಕಿಗೆ ತುತ್ತಾಗುವವರ ಮನೆಯ ಮುಂದೆ ಬೋರ್ಡ್ ಹಾಕಬೇಡಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಸೋಂಕಿತರ ಮನೆ ಮುಂದೆ ಫಲಕ ಹಾಕುವುದ್ರಿಂದ ಅವರನ್ನ ಅಸ್ಪೃಶ್ಯರಂತೆ ಕಾಣಲಾಗ್ತಿದೆ. ಗುಣಮುಖವಾಗಿ ಬಂದ್ರೂ, ಅವರನ್ನ ಗೌರವದಿಂದ ಕಾಣಲ್ಲವೆಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸೋಂಕಿತರ ಮನೆಗೆ ಬೋರ್ಡ್ ಹಾಕುವ ಬದಲು, ಆರೋಗ್ಯ ಕಾರ್ಯಕರ್ತರನ್ನ ಅವರ ಮನೆಗೆ ಕಳುಹಿಸಿ, ಅವರಲ್ಲಿ ಧೈರ್ಯ, ಜಾಗೃತಿ ಮೂಡಿಸುವ ಕೆಲಸ ಮಾಡಲಿ. ಇದನ್ನ ಬಿಟ್ಟು ಹೀಗೆ ಅಪಮಾನ ಮಾಡುವುದು ಬೇಡ. ಸಿಎಂ ಈ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!