ಇಂದು ವಿಪಕ್ಷ ನಾಯಕನ ಆಯ್ಕೆ?

344

ಬೆಂಗಳೂರು: ರಾಜ್ಯ ಕಾಂಗ್ರೆಸ್ ಪಡೆಯಲ್ಲಿ ಭಾರೀ ಟೆನ್ಷನ್ ಗೆ ಕಾರಣವಾಗಿರುವ ವಿಧಾನಸಭೆಯ ವಿಪಕ್ಷ ನಾಯಕನ ಆಯ್ಕೆ ಇಂದು ನಡೆಯಲಿದೆ ಎನ್ನಲಾಗ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮೂಲ ಕಾಂಗ್ರೆಸ್ ನಾಯಕರ ನಡುವೆ ಜಟಾಪಟಿ ನಡೆದಿದೆ.

ವಿಪಕ್ಷ ನಾಯಕ, ಶಾಸಕಾಂಗದ ಲೀಡರ್ ಹಾಗೂ ಮುಖ್ಯ ಸಚೇತಕರ ನೇಮಕದ ಬಗ್ಗೆ ಇಂದು ಸಂಜೆಯೊಳಗೆ ಘೋಷಣೆ ಮಾಡುವ ಸಾಧ್ಯತೆಯಿದೆ. ಹೆಚ್.ಕೆ ಪಾಟೀಲ ಸಹ ರೇಸ್ ನಲ್ಲಿದ್ದಾರೆ. ಸಿದ್ದರಾಮಯ್ಯನವರು ಸಿಎಂ ಆಗಿ ಅಧಿಕಾರ ಅನುಭವಿಸಿದ್ದಾರೆ. ಈ ಮೂಲಕ ಪಕ್ಷದಲ್ಲಿ ಗುಂಪುಗಾರಿಕೆ ಮಾಡಿಕೊಂಡು ತಮ್ಮ ಹಿಡಿತ ಸಾಧಿಸ್ತಿದ್ದಾರೆ. ಇದ್ರಿಂದಾಗಿ ಪಕ್ಷ ಸಂಘಟನೆಗೆ ತೊಂದ್ರೆಯಾಗುತ್ತೆ ಅನ್ನೋದು ಮೂಲ ಕಾಂಗ್ರೆಸ್ ನಾಯಕರ ವಾದ.

ಸಿದ್ಧು ಪರವಾದ ನಾಯಕರು, ರಾಜ್ಯದಲ್ಲಿ ಸಿದ್ದರಾಮಯ್ಯನವರ ವರ್ಚಸ್ಸಿನ ಮತ್ತೊಬ್ಬ ನಾಯಕರಿಲ್ಲ. ಹೀಗಾಗಿ ವಿಪಕ್ಷ ನಾಯಕನ ಸ್ಥಾನ ಅವರಿಗೆ ನೀಡಿದ್ರೆ, ರಾಜ್ಯದಲ್ಲಿ ಬಿಜೆಪಿ ಕಟ್ಟಿ ಹಾಕಲು ಸಾಧ್ಯ ಅಂತಿದ್ದಾರೆ. ಸುಮಾರು 46 ಶಾಸಕರು ಸಿದ್ದರಾಮಯ್ಯ ಪರ ಸಹಿ ಮಾಡಿದ್ದಾರೆ. ಆದ್ರೆ, ಈ ಸಹಿ ಸಂಗ್ರಹ ಸಿದ್ದರಾಮಯ್ಯಗೆ ಉಲ್ಟಾ ಹೊಡೆಯುವ ಸಾಧ್ಯತೆಯಿದೆ.




Leave a Reply

Your email address will not be published. Required fields are marked *

error: Content is protected !!