ಪ್ರಜಾಸ್ತ್ರ ಸುದ್ದಿ
ವಿಜಯಪುರ: ಲಂಚ ಪಡೆಯುವಾಗ ಸಿಟಿ ಸರ್ವೇಯರ್ ಎಸಿಬಿ ಬಲೆಗೆ ಬಿದ್ದಿರುವ ಘಟನೆ ನಗರದ ಸಿಟಿ ಸರ್ವೇ ಕಚೇರಿನಲ್ಲಿ ನಡೆದಿದೆ. 4 ಸಾವಿರ ಲಂಚ ಪಡೆಯುವಾಗ ರವಿ ನಾಯ್ಕ ಎಸಿಬಿ ಬಲೆಗೆ ಬಿದ್ದ ಸಿಟಿ ಸರ್ವೇಯರ್ ಆಗಿದ್ದಾರೆ.
ಉಮರ್ ಫಾರೂಕ್ ಭಾಂಗಿ ಎಂಬಾತನಿಂದ ಲಂಚ ಪಡೆಯುವಾಗ ದಾಳಿ ಮಾಡಿದ್ದಾರೆ. ವಾರ್ಸಾ ಮಾಡಿ ಕೊಡಲು ಲಂಚದ ಬೇಡಿಕೆಯಿಟ್ಟಿದ್ದ ಅಧಿಕಾರಿ ಇದೀಗ ಸಿಕ್ಕಿಬಿದ್ದಿದ್ದಾರೆ. ವಿಜಯಪುರ ಎಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.