ಸಿಎಂ ಕೊಂಡಾಡಿದ ಶಾಸಕಿ ಹೆಬ್ಬಾಳ್ಕರ್

370

ಬೆಳಗಾವಿ: ಪ್ರವಾಹ ಪೀಡಿತ ಜಿಲ್ಲೆಯಾದ ಬೆಳಗಾವಿಗೆ ಸಿಎಂ ಬಿ.ಎಸ್ ಯಡಿಯೂರಪ್ಪನವರು ಇಂದು ಭೇಟಿ ನೀಡಿದ್ರು. ಈ ವೇಳೆ ಅವರು ನಗರದ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಸಭೆ ನಡೆಸಿದ್ರು.

ಸಭೆಯಲ್ಲಿ ಮಾತ್ನಾಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಸಿಎ ಬಿಎಸ್ವೈ ಅವರನ್ನ ಫುಲ್ ಜೋರಾಗಿ ಕೊಂಡಾಡಿದ್ರು. ನಮ್ಮ ಜನ ನಿಮ್ಮ ಫೋಟೋ ಮನೆಯಲ್ಲಿ ಹಾಕ್ತಾರೆ. ನೀವು ತುಂಬಾ ದಯಾಳು ಅಂತಾ ಹಾಡಿ ಹೊಗಳಿದ್ದಾರೆ. ಸದ್ಯ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದಿಂದ ಒಳ್ಳೆಯ ಕೆಲಸವಾಗ್ತಿದೆ ಅಂತಾ ಶಾಸಕಿ ಹೇಳಿದ್ದಾರೆ.

ಬಿದ್ದ ಮನೆಗೆ ಎ, ಬಿ ಹಾಗೂ ಸಿ ಕೆಟಗರಿ ಮಾಡಲಾಗಿದೆ. ಎ,ಬಿ ಕೆಟಗರಿ ಸಾಕು. ಸಿ ತೆಗೆದುಹಾಕಿ ಪರಿಹಾರ ನೀಡಿದ್ರೆ, ನಮ್ಮ ಜನ ನಿಮ್ಮ ಫೋಟೋ ಮನೆಯಲ್ಲಿ ಇಡ್ತಾರೆ ಅಂತಾ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!