ಮೋದಿಗೆ ಮೇಲೆ ಜೋರಾಗಿದೆ ಟ್ವೀಟ್ ವಾರ್

414

ಕರ್ನಾಟಕಕ್ಕೆ ಪ್ರವಾಹದ ಪರಿಹಾರ ನೀಡುವಲ್ಲಿ ಸಾಕಷ್ಟು ವಿಳಂಬ ಮಾಡ್ತಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಇದೀಗ ಟ್ವೀಟ್ ವಾರ್ ಶುರುವಾಗಿದೆ. #NotFairModiji ಅನ್ನೋ ಹ್ಯಾಶ್ ಟ್ಯಾಗ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ವಾಗ್ದಾಳಿ ನಡೆಸಲಾಗ್ತಿದೆ.

ಮೋದಿಗೆ ವೋಟ್ ಹಾಕಲು ಯುವ ಚೌಕಿದಾರರು ಬೆಂಗಳೂರಿನಿಂದ ಟ್ರೇನ್ ಹತ್ತಿ ಉತ್ತರ ಕರ್ನಾಟಕ್ಕೆ ಬಂದಿದ್ರು. ಈಗ ಅವರ ಕುಟುಂಬ ಎಲ್ಲವನ್ನ ಕಳೆದುಕೊಂಡಿದೆ. ಜನರು ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ. ಹೀಗಿರುವಾಗ್ಲೂ ನಾಯಕ ಚೌಕಿದಾರ ಅವರಿಗೆ ಸಹಾಯ ಮಾಡಲು ತಯಾರಿಲ್ಲ. #NotFairModiji #WewantFloodRelief ಎಂದು ಟ್ವೀಟ್ ಮಾಡಲಾಗಿದೆ.

ಪರಿಹಾರದ ಬಗ್ಗೆ ಪ್ರಶ್ನೆ ಮಾಡಿರುವ ಚಕ್ರವರ್ತಿ ಸೂಲಿಬೆಲೆ ಅವರನ್ನ ಬ್ಲಾಕ್ ಮಾಡಿರುವ ಕೇಂದ್ರ ಸಚಿವ ಡಿ.ವಿ ಸದಾನಂದಗೌಡರ ಮೇಲೆ ಟ್ವೀಟ್ ದಾಳಿ ಮಾಡಲಾಗಿದೆ. #StopUrArroganceDVS ಅನ್ನೋ ಹ್ಯಾಶ್ ಟ್ಯಾಗ್ ಮೂಲಕ ಟ್ರೆಂಡ್ ಆಗಿದೆ. ಇನ್ನು ಕೆಲವರು ಐ ಆ್ಯಮ್ ವಿಥ್ ಚಕ್ರವರ್ತಿ ಸೂಲಿಬೆಲೆ ಎಂದು ಹೇಳುವ ಮೂಲಕ ಅವರ ಜೊತೆ ನಿಂತಿದ್ದಾರೆ.




Leave a Reply

Your email address will not be published. Required fields are marked *

error: Content is protected !!