ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ ಅಭಿಮಾನಿಗಳಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. ಅದೇನಂದ್ರೆ ಶಿವಣ್ಣ ಅಭಿನಯದ ಆಯುಷ್ಮಾನ್ ಭವ ಚಿತ್ರ ನವೆಂಬರ್ 1 ಕ್ಕೆ ರಿಲೀಸ್ ಆಗ್ತಿದೆ.
ದ್ವಾರಕೀಶ ಕಂಬೈನ್ಸ್ ನಲ್ಲಿ ಮೂಡಿಬಂದಿರುವ ಚಿತ್ರದಲ್ಲಿ ಶಿವಣ್ಣನಿಗೆ ಜೊತೆಯಾಗಿ ರಚಿತಾ ರಾಮ, ನಿಧಿ ಸುಬ್ಬಯ್ಯ ಸೇರಿದಂತೆ ಅನೇಕ ಜನರ ತಾರಾಬಳಗವಿದೆ. ಆಯುಷ್ಮಾನ್ ಭವ ಮೂವಿಗೆ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳ ಸಕ್ಸಸ್ ನಿರ್ದೇಶಕ ಪಿ.ವಾಸು ಆಕ್ಷನ್ ಕಟ್ ಹೇಳಿದ್ದಾರೆ.
ಇಲ್ಲಿ ಒಂದಿಷ್ಟು ವಿಶೇಷತೆಗಳಿವೆ. ದ್ವಾರಕೀಶ ಸಂಸ್ಥೆ ಶುರುವಾದಗ ಮೊದಲ ಚಿತ್ರ ನಿರ್ಮಾಣ ಮಾಡಿದ್ದು ಡಾ.ರಾಜಕುಮಾರ ಅವರ ಮೇಯರ್ ಮುತ್ತಣ್ಣ ಚಿತ್ರದ ಮೂಲಕ. ಇದೀಗ ಈ ಸಂಸ್ಥೆಗೆ 50 ವರ್ಷ. ಈ ವೇಳೆ ಡಾ.ರಾಜಕುಮಾರ ಮಗ, ನಟ ಶಿವರಾಜಕುಮಾರ ಆ್ಯಕ್ಟ್ ಮಾಡಿದ್ದಾರೆ.
ಶಿವಣ್ಣನ ಸತ್ಯ ಇನ್ ಲವ್ ಸಿನ್ಮಾ ಮೂಲಕ 50 ಸಿನ್ಮಾಗಳಿಗೆ ಸಂಗೀತ ನಿರ್ದೇಶಕರಾಗಿದ್ದ ಗುರುಕಿರಣಗೆ ಆಯುಷ್ಮನ್ ಭವ ಚಿತ್ರ 100ನೇ ಚಿತ್ರವಾಗಿರುವುದು ಡಬಲ್ ಖುಷಿ. ಹೀಗೆ ಹಲವು ವಿಶೇಷತೆಗಳನ್ನ ಈ ಚಿತ್ರ ಹೊಂದಿದೆ.