ಬೆಂಗಳೂರು: ಸಿಎಂ ಬಿ.ಎಸ್ ಯಡಿಯೂರಪ್ಪ ಸಚಿವ ಸಂಪುಟದ ಖಾತೆ ಲೆಕ್ಕಾಚಾರ ಮುಗಿದಿದೆ. 17 ಜನ ನೂತನ ಸಚಿವರ ಖಾತೆಗಳನ್ನ ಹಂಚಿಕೆ ಮಾಡಲಾಗಿದೆ. ಮೂವರಿಗೆ ಅದೃಷ್ಟ ಖುಲಾಯಿಸಿದೆ. ಗೋವಿಂದ ಕಾರಜೋಳ, ಅಶ್ವತನಾರಾಯಣ ಹಾಗೂ ಸವದಿಗೆ ಬಂಪರ್ ಬಹುಮಾನ ಕೊಡಲಾಗಿದೆ.
ಕಾರಜೋಳ, ಡಾ.ಅಶ್ವತನಾರಾಯಣ ಹಾಗೂ ಲಕ್ಷ್ಮಣ ಸವದಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಈ ಮೂಲಕ ಮೂವರು ಡಿಸಿಎಂಗಳನ್ನ ಬಿಜೆಪಿ ಸರ್ಕಾರ ಹೊಂದಿದೆ. ಇನ್ನು ಯಾರಿಗೆ ಯಾವ ಖಾತೆ ಅನ್ನೋದು ಇಲ್ಲಿದೆ ನೋಡಿ.