ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ನಗರಗಳಿಂದ ಹಳ್ಳಿಗೆ ಬಂದಿರುವ ಜನರ ಬಗ್ಗೆ ನಿಗಾ ವಹಿಸಿ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಕೋವಿಡ್ ಸೋಂಕು ಹೆಚ್ಚಾಗ್ತಿರುವ ಹಿನ್ನೆಲೆಯಲ್ಲಿ ಡಿಸಿ, ಎಸ್ಪಿ, ಡಿಹೆಚ್ಓ, ಸಿಇಒ, ಸರ್ಕಾರಿ ವೈದ್ಯಕೀಯ ಕಾಲೇಜುಗಳ ಡೀನ್ ಗಳ ಜೊತೆ ವಿಡಿಯೋ ಸಭೆ ನಡೆಸಿ ಈ ರೀತಿ ಹೇಳಿದ್ದಾರೆ.
ಬೆಂಗಳೂರಿನಿಂದ ಸಾಕಷ್ಟು ಜನರು ಹಳ್ಳಿಗಳಿಗೆ ಹೋಗಿದ್ದಾರೆ. ಅವರ ಬಗ್ಗೆ ನಿಗಾ ಇರಲಿ. ರೋಗಿಗಳಿಗೆ ಮಡಿಕಲ್ ಕಿಟ್ ನೀಡಿ, ಹೋಮ್ ಐಸೋಲೇಷನ್ ಆಗುವವರಿಗೆ ವೈದ್ಯಕೀಯ ಸಲಹೆ ನೀಡಿ. ಇನ್ನು ಮಹಾರಾಷ್ಟ್ರಗಳಿಂದ ಜನರು ಹೆಚ್ಚಿಗೆ ಬರ್ತಿದ್ದಾರೆ. ಅವರ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ರು.
ಈ ವೇಳೆ ಆರೋಗ್ಯ ಸಚಿವ ಡಾ.ಕೆ ಸುಧಾಕರ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ, ಡಿಸಿಎಂ ಅಶ್ವಥನಾರಾಯಣ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ರು.