ಯಡಿಯೂರಪ್ಪ ಮತ್ತೆ ಜೈಲಿಗೆ ಹೋಗುವ ಆತಂಕ: ಹೆಚ್.ವಿಶ್ವನಾಥ

229

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಬಿಜೆಪಿ ಎಂಎಲ್ ಸಿ ಹೆಚ್.ವಿಶ್ವನಾಥ ಮತ್ತೆ ಬಿಎಸ್ವೈ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೀರಾವರಿ ಇಲಾಖೆಯಲ್ಲಿ ತರಾತುರಿಯಲ್ಲಿ 20 ಸಾವಿರ ಕೋಟಿ ರೂಪಾಯಿ ಟೆಂಡರ್ ಕರೆಯಲಾಗಿದೆ. ಇದ್ರಿಂದ ಪಕ್ಷಕ್ಕೆ ಹಾನಿಯಾಗುತ್ತದೆ. ಈ ಬಗ್ಗೆ ಅರುಣ ಸಿಂಗ್ ಅವರ ಗಮನಕ್ಕೆ ತಂದಿದ್ದೇನೆ ಅಂತಾ ಹೇಳಿದ್ರು.

ಇನ್ನು 75 ವರ್ಷ ಮೇಲ್ಪಟ್ಟವರಿಗೆ ಅಧಿಕಾರ ಬೇಡ ಅನ್ನೋ ಪಕ್ಷದ ಸಿದ್ಧಾಂತದ ಬಗ್ಗೆ ಪ್ರಸ್ತಾಪಿಸಿದ್ದೇನೆ. ಯಡಿಯೂರಪ್ಪಗೆ ಶಕ್ತಿಯಿಲ್ಲವೆಂದು ನಾನು ಹೇಳುತ್ತಿಲ್ಲ. ಸಚಿವರೇ ಹೇಳುತ್ತಿದ್ದಾರೆ ಎಂದರು. ಸಚಿವರ ಎಲ್ಲ ಇಲಾಖೆಯಲ್ಲಿ ವಿಜಯೇಂದ್ರ ಹಸ್ತಕ್ಷೇಪವಿದೆ. ಇಂತಹ ನಾಯಕನಿಂದ ಪ್ರಯೋಜನವಿಲ್ಲವೆಂದು ಕಿಡಿ ಕಾರಿದರು.

ವಿಧಾನಸೌಧದ ಶಕ್ತಿಪೀಠ ಕುಸಿಯುತ್ತಿದೆ. ನಾಯಕತ್ವ ಕುಸಿಯುತ್ತಿದೆ. ಯಡಿಯೂರಪ್ಪ ಮತ್ತೆ ಜೈಲಿಗೆ ಹೋಗುತ್ತಾರೆ ಅನ್ನೋ ಆತಂಕವಿದೆ ಎಂದು ಹೇಳುವ ಮೂಲಕ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ. ಈ ಮೂಲಕ ಸಿಎಂ ಡ್ಯಾಮೇಜ್ ಗೆ ಸಂಪೂರ್ಣವಾಗಿ ಹೆಚ್.ವಿಶ್ವನಾಥ ಸಿದ್ಧರಾಗಿ ನಿಂತಿರುವಂತೆ ಕಾಣುತ್ತೆ.




Leave a Reply

Your email address will not be published. Required fields are marked *

error: Content is protected !!