‘ಹೆಚ್.ವಿಶ್ವನಾಥ ವಿಡಿಯೋ ಬಯಲಾದ್ರೆ ಅವರ ಸಂಸ್ಕೃತಿ ತಿಳಿಯುತ್ತೆ’

239

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ನೀರಾವರಿ ಇಲಾಖೆಯ 20 ಸಾವಿರ ಕೋಟಿ ಟೆಂಡರ್ ಗೆ ಸಂಬಂಧಿಸಿದಂತೆ ಬಿಜೆಪಿ ಎಂಎಲ್ ಸಿ ಹೆಚ್.ವಿಶ್ವನಾಥ ಸಿಎಂ ಬಿಎಸ್ವೈ ವಿರುದ್ಧ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶೀ ಎಂ.ಪಿ ರೇಣುಕಾಚಾರ್ಯ, ಹೆಚ್.ವಿಶ್ವನಾಥ ಆಡಿಯೋ, ವಿಡಿಯೋ ಬಹಿರಂಗವಾದರೆ ಅವರ ಸಂಸ್ಕೃತಿ ಗೊತ್ತಾಗುತ್ತೆ ಎಂದಿದ್ದಾರೆ.

ನೀರಾವರಿ ಇಲಾಖೆಯ ಟೆಂಡರ್ ಪಾರರ್ದಶಕವಾಗಿ ನಡೆದಿದೆ. ಬಿಡುಗಡೆಯಾದ ಹಣ ಹಾಗೂ ಕಾಮಗಾರಿಯ ವಿವರ ವೆಬ್ ಸೈಟ್ ನಲ್ಲಿದೆ. ಆದ್ರೆ, ಅಕ್ರಮ ನಡೆದಿದೆ ಅನ್ನೋದು ಸತ್ಯಕ್ಕೆ ದೂರವಾದದ್ದು. ಹೆಚ್.ವಿಶ್ವನಾಥ ಅವರು, ಬಿಎಸ್ವೈ, ಸಿದ್ದರಾಮಯ್ಯ, ಕುಮಾರಸ್ವಾಮಿ, ದೇವೇಗೌಡ ಸೇರಿ ಎಲ್ಲರ ಬಗ್ಗೆಯೂ ಮಾತ್ನಾಡ್ತಾರೆ. ಆ ವ್ಯಕ್ತಿಯ ನಾಲಿಗೆ ಸಂಸ್ಕೃತಿ ಎಲ್ಲರಿಗೂ ಗೊತ್ತಿದೆ ಅಂತಾ ಕಿಡಿ ಕಾರಿದ್ರು.




Leave a Reply

Your email address will not be published. Required fields are marked *

error: Content is protected !!