ಬಿಜೆಪಿ ಪ್ರಜಾಪ್ರಭುತ್ವದ ಆತ್ಮವನ್ನೇ ಕಸಿಯುತ್ತಿದೆ: ಎಂಎಲ್ಸಿ ವಿಶ್ವನಾಥ್

166

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ: ಬಿಜೆಪಿ ಸರ್ಕಾರದಲ್ಲಿ ಬರೀ ದುಡ್ಡು ದುಡ್ಡು. ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ. ಶಾಲೆಗಳಿಗೆ ಕಾವಿ ಬಣ್ಣ ಹೊಡೆಯುವುದು ಯೋಜನೇನಾ? ಬಿಜೆಪಿ ಪ್ರಜಾಪ್ರಭುತ್ವದ ಆತ್ಮವನ್ನೇ ಕಸಿಯುತ್ತಿದೆ ಎಂದು ಎಂಎಲ್ಸಿ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.

ಬಿಜೆಪಿ ಅಯೋಗ್ಯ ಸರ್ಕಾರ. ಮತದಾರರ ಪಟ್ಟಿಯನ್ನೇ ಡಿಲಿಟ್ ಮಾಡಿದೆ ಎನ್ನುತ್ತಲೇ ಶಾಸಕ ರಮೇಶ ಜಾರಕಿಹೊಳಿ ಮಾತಿಗೆ ಅಸಮಾಧಾನ ವ್ಯಕ್ತಪಡಿಸಿದರು. ನಾವೆಲ್ಲರೂ ಬಂದು ಬಿಜೆಪಿ ಸರ್ಕಾರ ಮಾಡಿದ್ದೇವೆ. ಜನರು ಎಲ್ಲವನ್ನೂ ನೋಡುತ್ತಿದ್ದಾರೆ. ಚುನಾವಣೆಯಲ್ಲಿ ಇನ್ನೊಬ್ಬರನ್ನು ಮುಗಿಸುತ್ತೇವೆ ಅನ್ನೋದು ಸರಿಯಲ್ಲ. ಜನರು ಏನು ಬೇಕಾದರೂ ಮಾಡಬಹುದು ಎಂದರು.

ಈ ರೀತಿಯ ಹೇಳಿಕೆಗಳನ್ನು ನೀಡುವುದು ರಮೇಶ ಜಾರಕಿಹೊಳಿ ಅವರಿಗೆ ಗೌರವವಲ್ಲ. ಯಾರು ಯಾರನ್ನು ಮುಗಿಸಲು ಆಗಲ್ಲ ಅಂತಾ ಹೇಳಿದರು. ಇನ್ನು ಸಿಎಂ, ಮಾಜಿ ಸಿಎಂಗಳು ಧಮ್, ತಾಕತ್ತು ಎಂದು ಗಲ್ಲಿ ರೌಡಿಗಳ ತರ ಮಾತನಾಡುತ್ತಿದ್ದಾರೆ. ಹೀಗೆ ಹೇಳಿ ಜನರ ಬಳಿ ಯಾವ ಮುಖ ಹೊತ್ತು ಹೋಗುತ್ತಾರೆ. ರಾಜಕೀಯ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ ಅಂತಾ ಕಿಡಿ ಕಾರಿದರು.




Leave a Reply

Your email address will not be published. Required fields are marked *

error: Content is protected !!