ಸಿದ್ದರಾಮಯ್ಯ ಹೆಣ ನಾಯಿನೂ ಮೂಸಲ್ಲ: ಈಶ್ವರಪ್ಪ ಅಮಾನವೀಯ ಹೇಳಿಕೆ

142

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸದಾ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಲೇ ಬರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಒಮ್ಮೊಮ್ಮೆ ಆಡಬಾರದ ಮಾತುಗಳನ್ನು ಸಹ ಆಡುತ್ತಾರೆ. ಅದಕ್ಕೆ ಮತ್ತೊಂದು ಉದಾಹರಣೆ ಸಿದ್ದರಾಮಯ್ಯನವರ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು.

ನಾನು ಸತ್ತರೂ ನನ್ನ ಹೆಣ ಕೂಡ ಬಿಜೆಪಿಗೆ ಹೋಗುವುದಿಲ್ಲವೆಂದು ಮಾಜಿ ಸಿಎಂ ಸಿದ್ದರಾಮಯ್ಯ ನಿನ್ನೆ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡುವ ಭರದಲ್ಲಿ, ಸಿದ್ದರಾಮಯ್ಯ ಜೀವಂತವಿರುವಾಗಲೇ ನಮ್ಮ ಪಾರ್ಟಿಗೆ ಸೇರಿಸಿಕೊಳ್ಳಲ್ಲ. ಇನ್ನು ಅವರ ಹೆಣ ತಗೊಂಡು ನಾವೇನು ಮಾಡೋಣ. ಅವರ ಹೆಣವನ್ನು ನಾಯಿನೂ ಮೂಸಲ್ಲ. ನಾವೇಕೆ ಮುಟ್ಟೋಣ ಎಂದು ತುಂಬಾ ಅಮಾನವೀಯವಾಗಿ ಮಾತನಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!