ತಂದೆಯ ಜೊತೆ ಜಗಳ: ಅಣ್ಣನ ಕೊಲೆಯಲ್ಲಿ ಅಂತ್ಯ!

247

ಪ್ರಜಾಸ್ತ್ರ ಅಪರಾಧ ಸುದ್ದಿ

ದೇವರಹಿಪ್ಪರಗಿ: ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಮಗನೊಬ್ಬ ಜಗಳವಾಡಿದ್ದಾನೆ. ಈ ವೇಳೆ ಜಗಳ ಬಿಡಿಸಲು ಬಂದ ಅಣ್ಣನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದ್ದು, ಆತ ಮೃತ ಪಟ್ಟಿದ್ದಾನೆ.

ತಾಲೂಕಿನ ಮಣೂರ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ರಾಜು(ಅರ್ಜುನ) ಶಂಕರ್ ರಾಠೋಡ(32) ಮೃತ ದುರ್ದೈವಿ. ಹಣಮಂತ ಶಂಕರ ರಾಠೋಡ ಹಲ್ಲೆ ಮಾಡಿದ ಸಹೋದರನಾಗಿದ್ದಾನೆ.

ಮೃತ ದುರ್ದೈವಿ ರಾಜು

ಮೂರು ಜನ ಮಕ್ಕಳು ತಲಾ 15 ಸಾವಿರ ರೂಪಾಯಿಯನ್ನ ತಾಯಿಯ ಆರೋಗ್ಯಕಾಗಿ ನೀಡಿದ ಹಣ ಕೊಡಲು ವಿಚಾರವಾಗಿ ತಂದೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಲು ಹೋದಾಗ ಬಿಡಿಸಲು ಹೋದ ಅಣ್ಣನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದು ಕೊಲೆಯಲ್ಲಿ ಅಂತ್ಯವಾಗಿದೆ.

ಇನ್ನೊಬ್ಬ ಸಹೋದರ ನ್ಯಾಮದೇವ ಚಿಕ್ಕಪುಟ್ಟ ಗಾಯಗಳಾಗಿದ್ದು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ
ಹಣಮಂತ ಶಂಕರ್ ರಾಠೋಡ ವಿರುದ್ಧ ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!