ಪ್ರಜಾಸ್ತ್ರ ಕ್ರೀಡಾ ಸುದ್ದಿ
ಬೆಂಗಳೂರು: ಸೌಥ್ ಆಫ್ರಿಕಾ ಹಾಗೂ ಭಾರತ ನಡುವೆ 5ನೇ ಹಾಗೂ ಕೊನೆಯ ಟಿ-20 ಪಂದ್ಯ ಭಾನುವಾರ ರಾತ್ರಿ ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿತ್ತು. ಆದರೆ, ವರುಣದೇವ ಅದಕ್ಕೆ ಅವಕಾಶ ನೀಡಲಿಲ್ಲ.
ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ 3.3 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 28 ರನ್ ಗಳಿಸಿತ್ತು. ಆಗ ಮತ್ತೆ ಮಳೆ ಸುರಿಯಲು ಪ್ರಾರಂಭಿಸಿತು. ಹೀಗಾಗಿ ಪಂದ್ಯ ಮುಂದೂಡಲಾಯಿತು. ರಾತ್ರಿ 9.30ರತನಕ ಮಳೆ ಮುಂದುವರೆಯಿತು. ಅಲ್ಲದೆ ಮತ್ತೆ ಮಳೆ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದ ಕಾರಣಕ್ಕೆ ಪಂದ್ಯ ರದ್ದುಗೊಳಿಸಲಾಯಿತು.
ಪಂದ್ಯ ರದ್ದಾದ ಕಾರಣಕ್ಕೆ 2-2 ಸಮಬಲ ಸಾಧಿಸಿದ ತಂಡಕ್ಕೆ ಸರಣಿ ಗೆಲುವಿನ ಸಿಹಿ ಸಿಗಲಿಲ್ಲ. ಇನ್ನು ಪಂದ್ಯ ನೋಡಲಾಗದೆ ವಾಪಸ್ ಆದ ಕ್ರಿಕೆಟ್ ಪ್ರೇಮಿಗಳಿಗೆ ಶೇಕಡ 50ರಷ್ಟು ಹಣ ವಾಪಸ್ ಮಾಡುವುದಾಗಿ ಕೆಎಸ್ ಸಿಎ ತಿಳಿಸಿದೆ.