‘ಯಾರಿಗೂ ಚಾ ಕುಡಿಸದೆ, ಐದು ಪೈಸೆ ಕೊಡದೆ ಸಿಎಂ ಆದವನು ನಾನು’

457

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ಸಿಎಂ ಮಾಡುತ್ತೇವೆ 2,500 ಕೋಟಿ ರೂಪಾಯಿ ಸಿದ್ಧವಿಟ್ಟುಕೊಳ್ಳಿ ಎಂದು ದೆಹಲಿಯಿಂದ ಬಂದವರು ಹೇಳಿದ್ದರು ಅಂತಾ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದು, ರಾಜಕೀಯ ಪಡಸಾಲೆಯಲ್ಲಿ ದೊಡ್ಡ ಚರ್ಚೆ ನಡೆದಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ನಾನು ಯಾರಿಗೂ ಚಾ ಕುಡಿಸದೆ, ಐದು ಪೈಸೆ ಕೊಡದೆ ಸಿಎಂ ಆದವನು ಎಂದಿದ್ದಾರೆ.

ಶಾಸಕರು ಆಯ್ಕೆ ಮಾಡಿದರು. ಹೈಕಮಾಂಡ್ ಒಪ್ಪಿತು. ಐದು ವರ್ಷ ಯಾರಿಗೂ ಹಣ ಕೊಡದೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದೇನೆ ಎಂದು ಹೇಳಿದರು.




Leave a Reply

Your email address will not be published. Required fields are marked *

error: Content is protected !!