ಯಡಿಯೂರಪ್ಪಗೆ ವಯಸ್ಸಾಗಿದೆ ಸಿಎಂ ಬದಲಾವಣೆ ಮಾಡಬೇಕು: ಹೆಚ್.ವಿಶ್ವನಾಥ

234

ಪ್ರಜಾಸ್ತ್ರ ಸುದ್ದಿ

ಮೈಸೂರು: ಸಚಿವ ಸ್ಥಾನ ಸಿಗದಿರುವುದಕ್ಕೋ ಯಾವ ಕಾರಣಕ್ಕೋ ಗೊತ್ತಿಲ್ಲ, ತಾವೇ ಬೆಂಬಲ ಸೂಚಿಸಿ ಬಿಜೆಪಿ ಸರ್ಕಾರ ರಚನೆಗೆ ಕಾರಣರಾದವರಲ್ಲಿ ಒಬ್ಬರಾದ ಎಂಎಲ್ ಸಿ ಹೆಚ.ವಿಶ್ವನಾಥ ಸದಾ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸ್ತಾನೆ ಇದ್ದಾರೆ. ನಾಯಕತ್ವ ಬದಲಾವಣೆ ವಿಚಾರದಲ್ಲಿ ಬಿಎಸ್ವೈ ವಿರುದ್ಧದ ಹೇಳಿಕೆಗಳನ್ನ ಕೊಡುತ್ತಲೇ ಬರ್ತಿದ್ದಾರೆ.

ಯಡಿಯೂರಪ್ಪಗೆ ವಯಸ್ಸಾಗಿದೆ. ಎಲ್ಲರನ್ನ ಜೊತೆಯಲ್ಲಿ ಕರೆದುಕೊಂಡು ಹೋಗುವ ಶಕ್ತಿ ಸಿಎಂಗೆ ಈಗ ಇಲ್ಲ ಎಂದು ಹೇಳುವ ಮೂಲಕ, ನೇರವಾಗಿ ಸಿಎಂ ಸ್ಥಾನದಿಂದ ಅವರನ್ನ ಕೆಳಗೆ ಇಳಿಸಿ ಅನ್ನೋ ಮಾತುಗಳನ್ನ ಆಡಿದ್ದಾರೆ. ಅಲ್ದೇ, ಸಿಎಂ ಸ್ಥಾನಕ್ಕೆ ಪಂಚಮಸಾಲಿ ಲಿಂಗಾಯುತ ನಾಯಕರಿಗೆ ಸ್ಥಾನ ಕೊಡಲಿ.

ಪಂಚಮಸಾಲಿಯಲ್ಲಿ ಮಿಡ್ಲ್ ಏಜು ಬೇಕಾದರೆ ನಿರಾಣಿಗೆ ಕೊಡಿ. ಎಲ್ಲದಕ್ಕೂ ಬೇಕು ಅಂದ್ರೆ ಬಸನಗೌಡ ಪಾಟೀಲ ಯತ್ನಾಳ ಅವರನ್ನ ಮಾಡಿ, ಯಂಗ್ ಸ್ಟಾರ್ ಬೇಕಾದರೆ ಅರವಿಂದ ಬೆಲ್ಲದ ಅವರನ್ನ ಸಿಎಂ ಮಾಡಿ ಎಂದು ಹೇಳುವ ಮೂಲಕ, ನೇರವಾಗಿ ಯಡಿಯೂರಪ್ಪನವರನ್ನ ಕೆಳಗೆ ಇಳಿಸಿ ಎಂದು ಹೆಚ್.ವಿಶ್ವನಾಥ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!