ಲೋಕಸಭಾ ಚುನಾವಣೆ ತನಕ ಕಾಂಗ್ರೆಸ್ ಗ್ಯಾರೆಂಟಿ: ರಮೇಶ್ ಜಾರಕಿಹೊಳಿ

112

ಪ್ರಜಾಸ್ತ್ರ ಸುದ್ದಿ

ಅಥಣಿ: ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಠಳ್ಳಿ ಸೋಲಿನ ಬಗ್ಗೆ ಶಾಸಕ ರಮೇಶ್ ಜಾರಕಿಹೊಳಿ ಪರಾಮರ್ಶೆಯ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಅಭಿವೃದ್ಧಿಗೋಸ್ಕರ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರಿದ್ದಾರೆ. ಕ್ಷೇತ್ರ ಅಭಿವೃದ್ಧಿ ಮಾಡಲಿ. ನಾವು ಅವರಿಗೆ ಸಹಕಾರ ನೀಡುತ್ತೇವೆ ಎಂದರು.

ಗ್ಯಾರೆಂಟಿ ನಂಬಿ ಜನರು ಕಾಂಗ್ರೆಸ್ ಗೆ ಮತ ನೀಡಿದ್ದಾರೆ. ಗ್ಯಾರೆಂಟಿ ಕಾರ್ಡ್ ಬಗ್ಗೆ ಮಾತನಾಡಬೇಡಿ ಎಂದು ಪಕ್ಷದ ವರಿಷ್ಠರು ಹೇಳಿದ್ದಾರೆ. ಕಾಂಗ್ರೆಸ್ ನವರು ಜನರಿಗೆ ಖಂಡಿತ ಮೋಸ ಮಾಡುತ್ತಾರೆ. ಈ ಗ್ಯಾರೆಂಟಿಗಳೆಲ್ಲ ಲೋಕಸಭಾ ಚುನಾವಣೆ ತನಕ. ಆ ಮೇಲೆ ಕೈ ಕೊಡುತ್ತಾರೆ. ಗ್ಯಾರೆಂಟಿ ಹೆಸರಿನಲ್ಲಿ ಅಭಿವೃದ್ಧಿ ಕೆಲಸಗಳನ್ನು ಬಂದ್ ಮಾಡುತ್ತಿದ್ದಾರೆ ಅಂತಾ ಆರೋಪಿಸಿದರು.




Leave a Reply

Your email address will not be published. Required fields are marked *

error: Content is protected !!