ದೋಸ್ತಿ ಸರ್ಕಾರದ ಅಳಿವು ಉಳಿವಿನ ಪ್ರಶ್ನೆಗೆ ಇಂದು ಉತ್ತರ!

410

ಬೆಂಗಳೂರು: ಕಳೆದ ಮೂರು ದಿನಗಳಿಂದ ರಾಜ್ಯ ರಾಜಕೀಯ ಹೈಡ್ರಾಮಾ ದೇಶದಾದ್ಯಂತ ಸುದ್ದಿ ಮಾಡಿದೆ. 13 ಜನ ಶಾಸಕರು ರಾಜೀನಾಮೆ ನೀಡಿದ್ದು, ಇಂದು ಸ್ಪೀಕರ್ ತೆಗೆದುಕೊಳ್ಳುವ ನಿರ್ಧಾರದ ಮೇಲೆ ದೋಸ್ತಿ ಸರ್ಕಾರದ ಅಳಿವು ಉಳಿವು ನಿಂತಿದೆ.

ರಾಜೀನಾಮೆ ನೀಡಿರುವ ಶಾಸಕರು ಮುಂಬೈ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಇತ್ತ ಇನ್ನುಳಿದ ಜೆಡಿಎಸ್ ಶಾಸಕರನ್ನ ದೇವನಹಳ್ಳಿ ಬಳಿಯ ರೆಸಾರ್ಟ್ ಗೆ ಕಳುಹಿಸಿ ಕೊಡಲಾಗಿದೆ. ರಾಜ್ಯದಲ್ಲಿ ಇದೊಂದು ರೀತಿಯ ನಾಟಕವಾಗಿದೆ. ಈ ನಾಟಕ್ಕೆ ಇಂದು ತೆರೆ ಬೀಳುತ್ತಾ? ಇನ್ನು ಒಂದಿಷ್ಟು ದಿನ ಮುಂದೂಡಲಾಗುತ್ತಾ ಅನ್ನೋ ಕುತೂಹಲವಿದೆ.

ರಾಜ್ಯದ ಜನತೆ ಜಲ್ವಂತ ಸಮಸ್ಯೆಗಳನ್ನ ಎದುರಿಸ್ತಿದ್ದಾರೆ. ಇವರು ಮಾತ್ರ ಅಧಿಕಾರ, ಹಣ ಅಂತಾ ಸರ್ಕಾರ ಬೀಳಿಸಲು, ಉಳಿಸಿಕೊಳ್ಳಲು ರೆಸಾರ್ಟ್ ರಾಜಕೀಯ ಮಾಡ್ತಿದ್ದಾರೆ. ಇದ್ರಿಂದಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಜನರಿಗೆ ನಂಬಿಕೆ ಹೋಗುವಷ್ಟು ಹೊಲಸು ಕೆಲಸಕ್ಕೆ ಜನಪ್ರತಿನಿಧಿಗಳು ಇಳಿದಿರೋದು ನಿಜಕ್ಕೂ ದುರಂತ.


TAG


Leave a Reply

Your email address will not be published. Required fields are marked *

error: Content is protected !!