ಮತಾಂತರ ನಿಷೇಧ ಕಾಯ್ದೆ ಜಾರಿ ನಿಶ್ಚಿತ: ಬೊಮ್ಮಾಯಿ

277

ಪ್ರಜಾಸ್ತ್ರ ಸುದ್ದಿ

ಮಂಗಳೂರು: ರಾಜ್ಯದಲ್ಲಿ ಲವ್ ಜಿಹಾದ್ ಹಾಗೂ ಬಲವಂತದ ಮತಾಂತರವನ್ನ ತೆಡೆಗಟ್ಟುವ ನಿಟ್ಟಿನಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನ ಜಾರಿಗೆ ತರುವುದು ನಿಶ್ಚಿತ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಪಣಂಬೂರಿನಲ್ಲಿ ನೂತನ ಪೊಲೀಸ್ ವಸತಿಗೃಹಗಳನ್ನ ಉದ್ಘಾಟಿಸಿ ಮಾತ್ನಾಡಿದ ಅವರು, ಲವ್ ಜಿಹಾದ್ ನಿಯಂತ್ರಣಕ್ಕೆ ಸಮರ್ಥ ಕಾನೂನು ತರುತ್ತೇವೆ. ಹಿಂದೆ ವರದಕ್ಷಿಣೆ ಇತ್ತು. ಅದೊಂದು ಪಿಡುಗು ಎಂದ್ಮೇಲೆ ಕಾನೂನು ಮೂಲಕ ಜಾರಿಗೆ ತರಲಾಯ್ತು. ಅದೆ ರೀತಿ ಲವ್ ಜಿಹಾದ್ ಪಿಡುಗು, ಇದರ ವಿರುದ್ಧ ಕಾನೂನು ತರಲಾಗುತ್ತೆ ಎಂದರು.

ಇನ್ನು ಮಂಗಳೂರಿನ ಎರಡು ಕಡೆಯಲ್ಲಿ ಉಗ್ರರ ಪರವಾದ ಗೋಡೆ ಬರಹಗಳನ್ನ ಬಗ್ಗೆ ಮಾತ್ನಾಡಿದ್ರು. ಈ ಗೋಡೆ ಬರಹಗಳು ಇರಾಕ್, ಇರಾನ್ ದೇಶಗಳಲ್ಲಿ ಬರೆಯಲಾಗುತ್ತೆ. ಅದೇ ಮಾದರಿಯಲ್ಲಿ ಬರೆಯಲಾಗಿದೆ. ಈ ಪ್ರಕರಣವನ್ನ ಶೀಘ್ರದಲ್ಲಿ ಭೇದಿಸಲಾಗುತ್ತೆ ಎಂದರು.




Leave a Reply

Your email address will not be published. Required fields are marked *

error: Content is protected !!