ಪ್ರಜಾಸ್ತ್ರ ಸುದ್ದಿ
ಸಿಂದಗಿ: ಕೋವಿಡ್ 19 ಹಿನ್ನೆಲೆ ಹಾಗೂ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣಕ್ಕೆ ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಅತ್ಯಂತ ಸರಳವಾಗಿ ದಾಸ ಶ್ರೇಷ್ಠ ಕನಕದಾಸರ ಜಯಂತಿಯನ್ನ ಆಚರಣೆ ಮಾಡಲಾಗಿದೆ.
ತಹಶೀಲ್ದಾರ್ ಸಂಜೀವಕುಮಾರ ದಾಸರ ಹಾಗೂ ಸಮಾಜದ ಮುಖಂಡರು ಫೋಟೋಗೆ ಪುಷ್ಪಾರ್ಚನೆ ಮಾಡುವ ಮೂಲಕ ಕನಕದಾಸ ಜಯಂತಿ ಆಚರಿಸಲಾಯ್ತು. ಈ ವೇಳೆ ಶಿರಸ್ತೇದಾರರಾದ ಸುರೇಶ್ ಮ್ಯಾಗೇರಿ, ಜಿ.ಎಸ್ ರೂಡಗಿ, ಸಿ ಬಿ ಬಾಬಾನಗರ, ಕಂದಾಯ ನೀರಿಕ್ಷಕ ಐ.ಎಂ ಮಕಾನದಾರ, ಹಾಲುಮತ ಸಮಾಜದ ಮುಖಂಡರಾದ ಶರಣಪ್ಪ ಹೀರೆಕುರಬರ, ಸೋಮು ಹೂಗಾರ, ಸಿದ್ದು ಬೀರಗೊಂಡ ಸೇರಿದಂತೆ ಅನೇಕರು ಭಾಗವಹಿಸಿದ್ರು.