ಪ್ರಜಾಸ್ತ್ರ ಸುದ್ದಿ
ಮಂಡ್ಯ: ರಾಜ್ಯ ಚುನಾವಣೆಯ ಕಾವು ಜೋರಾಗುತ್ತಿದೆ. ಮತದಾರರಿಗೆ ಆಮಿಷಕ್ಕೆ ರಾಜಕೀಯ ನಾಯಕರು ಎಂದಿನಂತೆ ಸೀರೆ, ಕುಕ್ಕರ್, ಮಿಕ್ಸರ್, ಲಿಕ್ಕರ್ ಸೇರಿ ಇತರೆ ವಸ್ತುಗಳನ್ನು ನೀಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ. ಆಗ ಒಂದಿಷ್ಟು ವಸ್ತುಗಳು ಸಿಕ್ಕಿಬೀಳುತ್ತಿವೆ.
ಮಂಡ್ಯದಲ್ಲಿನ ಮತದಾರರಿಗೆ ಹಂಚಲು ಸುಮಾರು 35 ಲಕ್ಷ ಮೌಲ್ಯದ ಕುಕ್ಕರ್ ತೆಗೆದುಕೊಂಡು ಹೋಗುತ್ತಿರುವ ವೇಳೆ ನಾಗಮಂಡಲ ತಾಲೂಕಿನ ಕದಬಳ್ಳಿ ಚೆಕ್ ಪೋಸ್ಟ್ ಬಳಿ ಜಪ್ತಿ ಮಾಡಲಾಗಿದೆ. ಶೃಂಗೇರಿ ಶಾಸಕ ಜೆ.ಡಿ ರಾಜೇಗೌಡ ಅವರಿಗೆ ಸೇರಿದ ಕುಕ್ಕರ್ ಗಳು ಎಂದು ಹೇಳಲಾಗುತ್ತಿದೆ.
ಕ್ಷೇತ್ರದ ಮತದಾರರಿಗೆ ಹಂಚಲು ಬಾಳೆಹೊನ್ನೂರಿನಿಂದ ಖರೀದಿಸಿ ಕಂಟೈನರ್ ಮೂಲಕ ಬೆಂಗಳೂರು-ಮಂಗಳೂರು ಹೆದ್ದಾರಿ ಮೂಲಕ ತೆಗೆದುಕೊಂಡು ಹೊರಟಿದ್ದಾಗ ಪೊಲೀಸರು ತಪಾಸಣೆ ಮಾಡಿ ವಶಕ್ಕೆ ಪಡೆದಿದ್ದು, ಶಾಸಕ ಹಾಗೂ ಅಂಗಡಿ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆಯಂತೆ.