ರಾಜ್ಯದಲ್ಲಿ 65 ಜನ ಗುಣಮುಖ: ಶ್ರೀರಾಮುಲು

310

ದಾವಣಗೆರೆ: ದಾವಣಗೆರೆಯಲ್ಲಿ ಮೂರು ಕರೋನಾ ಪಾಸಿಟಿವ್ ಬಂದಿದ್ವು. ಇದೀಗ ಮೂವರು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ. ಕರೋನಾ ಪರಿಸ್ಥಿತಿಯನ್ನ ಸರಿಯಾಗಿ ನಿಭಾಯಿಸ್ತಿರುವ ಜಿಲ್ಲಾಡಳಿತಕ್ಕೆ ಅಭಿನಂದನೆ ತಿಳಿಸಿದ್ದಾರೆ.

ರಾಜ್ಯದಲ್ಲಿ 258 ಕೇಸ್ ದಾಖಲಾಗಿದ್ದು, ಅದರಲ್ಲಿ 65 ಜನರು ಗುಣಮುಖರಾಗಿದ್ದಾರೆ. ದೇವರ ದಯೆಯಿಂದ ಕರೋನಾ ಪಟ್ಟಿಯಲ್ಲಿ 3ನೇ ಸ್ಥಾನದಿಂದ 12ನೇ ಸ್ಥಾನಕ್ಕೆ ಬಂದಿದ್ದೇವೆ ಎಂದು ಹೇಳಿದ್ದಾರೆ. ದಾವಣಗೆರೆಯಲ್ಲಿ ಇನ್ನೆರಡು ದಿನಗಳಲ್ಲಿ ಟೆಸ್ಟಿಂಗ್ ಲ್ಯಾಬ್ ಶುರು ಮಾಡಲಾಗುತ್ತೆ. ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಟೆಸ್ಟಿಂಗ್ ಲ್ಯಾಬ್ ಕಿಟ್ ಕೊಡಲು ಐಸಿಎಂಆರ್ ಜೊತೆ ಮಾತ್ನಾಡ್ತಿದ್ದೇವೆ ಎಂದಿದ್ದಾರೆ.

ಒಂದು ಸಾವಿರ ಐಸಿಯು ಬೆಡ್, 6 ಸಾವಿರ ಐಸೋಲೇಷನ್ ಬೆಡ್ ತೆರೆಯಲಾಗಿದೆ. 1 ಲಕ್ಷದ ತನಕ ಕೇಸ್ ಬಂದ್ರೂ ನಿಭಾಯಿಸುವ ಶಕ್ತಿಯಿದೆ. ಆದ್ರೆ, ಜನರು ಮನೆಯಿಂದ ಆಚೆ ಬರಬಾರದು. ದಯವಿಟ್ಟು ಮನೆಯಲ್ಲಿ ಇರಬೇಕು ಎಂದು ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!